ತೋವಿನಕೆರೆ: ಸಮೀಪದ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಾಲಕುಂಟೆ ಗ್ರಾಮದ ಜೆ. ಅಭಿಷೇಕ್ಗೆ ಬೆಂಗಳೂರು ಕೃಷಿ ವಿ.ವಿ.ಯು ಕೊರಟಗೆರೆ ತಾಲ್ಲೂಕಿನ ಉತ್ತಮ ಯುವ ಕೃಷಿಕ ಎಂದು ಗುರುತಿಸಿ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಅಭಿಷೇಕ್ ತಮಗೆ ಸೇರಿದ ಎರಡು ಎಕರೆ ಜಮೀನಿಲ್ಲಿ ಹೈನುಗಾರಿಕೆ, ಮನೆಗೆ ಬೇಕಾದ ತರಕಾರಿ, ಸಮೃದ್ಧವಾದ ಅಡಿಕೆ, ತೆಂಗಿನ ತೋಟ, ಸಡ್ಡೆ ಸೊಪ್ಪು, ತೊಗರಿ ಬೆಳೆದಿದ್ದಾರೆ. ಕೋಳಿ ಸಾಕಾಣಿಕೆಗಾಗಿ ಮೇವನ್ನು ತಾವೇ ಸ್ವತಃ ತಯಾರುಮಾಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.