ADVERTISEMENT

ಜ್ಞಾನದ ಹುಡುಕಾಟ ನಡೆಸಿದ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 4:58 IST
Last Updated 8 ಡಿಸೆಂಬರ್ 2021, 4:58 IST
ತುಮಕೂರಿನ ಆದರ್ಶ ನಗರದಲ್ಲಿ ದಲಿತ ಛಲವಾದಿ ಮಹಾಸಭಾದಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಿಸಲಾಯಿತು. ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚಂದ್ರಪ್ಪ, ವಕೀಲ ರಾಜಣ್ಣ, ಯುವ ವೇದಿಕೆಯ ಹರ್ಷಧರ, ಮುಖಂಡರಾದ ಪುಟ್ಟಬೋರಯ್ಯ, ಶ್ರೀನಿವಾಸ್, ರಾಜಯ್ಯ, ಮಂಜುಳಾ, ನವೀನ್ ಇತರರು ಭಾಗವಹಿಸಿದ್ದರು
ತುಮಕೂರಿನ ಆದರ್ಶ ನಗರದಲ್ಲಿ ದಲಿತ ಛಲವಾದಿ ಮಹಾಸಭಾದಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಿಸಲಾಯಿತು. ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚಂದ್ರಪ್ಪ, ವಕೀಲ ರಾಜಣ್ಣ, ಯುವ ವೇದಿಕೆಯ ಹರ್ಷಧರ, ಮುಖಂಡರಾದ ಪುಟ್ಟಬೋರಯ್ಯ, ಶ್ರೀನಿವಾಸ್, ರಾಜಯ್ಯ, ಮಂಜುಳಾ, ನವೀನ್ ಇತರರು ಭಾಗವಹಿಸಿದ್ದರು   

ತುಮಕೂರು: ಅಗಾಧವಾದ ಜ್ಞಾನ ಹೊಂದಿದ್ದ ಡಾ.ಬಿ.ಆರ್.ಅಂಬೇಡ್ಕರ್, ತಮ್ಮ ಜೀವಿತದ ಕೊನೆಯಅವಧಿಯವರೆಗೂ ಜ್ಞಾನದ ಹುಡುಕಾಟದಲ್ಲಿ ತೊಡಗಿದ್ದರು ಎಂದು ದಲಿತ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ಚಂದ್ರಪ್ಪ ಹೇಳಿದರು.

ದಲಿತ ಛಲವಾದಿ ಮಹಾಸಭಾದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಂಬೇಡ್ಕರ್ ಜೀವನ, ಬದುಕಿದ ರೀತಿ ಅನೇಕರಿಗೆ ಮಾದರಿ. ಇಂದಿನ ಯುವಕರು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ವಕೀಲ ರಾಜಣ್ಣ, ‘ಭಾರತೀಯರಲ್ಲೇ ಡಾಕ್ಟರೇಟ್ ಪಡೆದ ಮೊದಲಿಗರು ಅಂಬೇಡ್ಕರ್. 64 ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಿದ್ದರು. ದೇಶದ 9 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅವರ ಸಮ ಸಮಾಜದ ಕನಸನ್ನು ನಾವೆಲ್ಲರೂ ನನಸು ಮಾಡಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

ಮಹಾಸಭಾ ಯುವ ವೇದಿಕೆಯ ಹರ್ಷಧರ ಮಾತನಾಡಿದರು. ಸಂಘಟನೆ ಮುಖಂಡರಾದ ಪುಟ್ಟಬೋರಯ್ಯ, ಶ್ರೀನಿವಾಸ್, ರಾಜಯ್ಯ, ಮಂಜುಳಾ, ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.