ADVERTISEMENT

ಪತ್ರಿಕೋದ್ಯಮಕ್ಕೂ ಅಂಬೇಡ್ಕರ್ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 4:12 IST
Last Updated 2 ಸೆಪ್ಟೆಂಬರ್ 2021, 4:12 IST
ತುರುವೇಕೆರೆಯಲ್ಲಿ ಡಾ.ಅಮ್ಮಸಂದ್ರ ಸುರೇಶ್ ಅವರ ‘ಧೀಮಂತ ಪತ್ರಕರ್ತ ಡಾ.ಬಿ.ಆರ್.ಅಂಬೇಡ್ಕರ್, ‘ಅಭಿವೃದ್ಧಿಗಾಗಿ ಸಂವಹನ’ ಕೃತಿಗಳನ್ನು ಪ್ರೊ.ಪುಟ್ಟರಂಗಪ್ಪ ಬಿಡುಗಡೆ ಮಾಡಿದರು. ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಪ್ರಮುಖರಾದ ಧನಪಾಲ್, ತುರುವೇಕೆರೆ ಪ್ರಸಾದ್, ಕಿರುತೆರೆ ನಟ ಸುರೇಶ್, ವೆಂಕಟರಾಮು, ಕುಂದೂರು ತಿಮ್ಮಯ್ಯ, ನಂ.ರಾಜು ಇತರರು ಇದ್ದರು
ತುರುವೇಕೆರೆಯಲ್ಲಿ ಡಾ.ಅಮ್ಮಸಂದ್ರ ಸುರೇಶ್ ಅವರ ‘ಧೀಮಂತ ಪತ್ರಕರ್ತ ಡಾ.ಬಿ.ಆರ್.ಅಂಬೇಡ್ಕರ್, ‘ಅಭಿವೃದ್ಧಿಗಾಗಿ ಸಂವಹನ’ ಕೃತಿಗಳನ್ನು ಪ್ರೊ.ಪುಟ್ಟರಂಗಪ್ಪ ಬಿಡುಗಡೆ ಮಾಡಿದರು. ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಪ್ರಮುಖರಾದ ಧನಪಾಲ್, ತುರುವೇಕೆರೆ ಪ್ರಸಾದ್, ಕಿರುತೆರೆ ನಟ ಸುರೇಶ್, ವೆಂಕಟರಾಮು, ಕುಂದೂರು ತಿಮ್ಮಯ್ಯ, ನಂ.ರಾಜು ಇತರರು ಇದ್ದರು   

ತುರುವೇಕೆರೆ: ಡಾ.ಬಿ.ಆರ್.ಅಂಬೇಡ್ಕರ್ ಮಹಾನ್ ಪತ್ರಕರ್ತರಾಗಿದ್ದು, ಪತ್ರಿಕೋದ್ಯಮದ ತತ್ವಗಳನ್ನು ಎತ್ತಿ ಹಿಡಿದಿದ್ದರು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷ
ಪ್ರೊ.ಪುಟ್ಟರಂಗಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕು ನಾಗರಿಕ ವೇದಿಕೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಅಮ್ಮಸಂದ್ರ ಸುರೇಶ್ ಅವರ ‘ಧೀಮಂತ ಪತ್ರಕರ್ತ ಡಾ.ಬಿ.ಆರ್.ಅಂಬೇಡ್ಕರ್’ ಹಾಗೂ ‘ಅಭಿವೃದ್ಧಿಗಾಗಿ ಸಂವಹನ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅಂಬೇಡ್ಕರ್ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ‘ಎರಡೂ ಪುಸ್ತಕಗಳು ಮೌಲ್ಯಯುತವಾಗಿದ್ದು, ಸಂಶೋಧಕರು, ವಿದ್ಯಾರ್ಥಿಗಳು, ಓದುಗರಿಗೆ ಅತ್ಯಂತ ಉಪಯುಕ್ತವಾಗಿವೆ’ ಎಂದು ತಿಳಿಸಿದರು.

ADVERTISEMENT

ಅಂಬೇಡ್ಕರ್ ಪತ್ರಿಕಾ ರಂಗಕ್ಕೆ ನೀಡಿದ ಕೊಡುಗೆಗಳನ್ನು ಪುಸ್ತಕದಲ್ಲಿ ಲೇಖಕರು ಸಂಶೋಧನೆಯ ಮೂಲಕ ದಾಖಲು ಮಾಡಿದ್ದಾರೆ ಎಂದು ಹೇಳಿದರು. ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು ಎಂದರು.

ನಾಗರಿಕ ವೇದಿಕೆ ಅಧ್ಯಕ್ಷ ಧನಪಾಲ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ತುರುವೇಕೆರೆ ಪ್ರಸಾದ್ ಆಶಯ ನುಡಿಗಳನ್ನಾಡಿದರು. ಕೃತಿಗಳ ಲೇಖಕರಾದ ಡಾ.ಅಮ್ಮಸಂದ್ರ ಸುರೇಶ್, ಕಿರುತೆರೆ ನಟ ಸುರೇಶ್,
ಮುಖಂಡರಾದ ವೆಂಕಟರಾಮು, ಕುಂದೂರು ತಿಮ್ಮಯ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಂ.ರಾಜು ಇತರರು
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.