ADVERTISEMENT

ಕೊಲೆ ಯತ್ನ: ಏಳು ಜನರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 15:50 IST
Last Updated 21 ಸೆಪ್ಟೆಂಬರ್ 2023, 15:50 IST
<div class="paragraphs"><p>FIR</p></div>

FIR

   

ಕೊರಟಗೆರೆ: ಪಾರಿವಾಳ ಮಾರಾಟಕ್ಕೆ ಸಂಬಂಧಿಸಿದಂತೆ ಯುವಕರ ನಡುವೆ ಗಲಾಟೆ ನಡೆದು, ನಾಲ್ವರು ಬಾಲಕರು ಸೇರಿದಂತೆ 7 ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಪಾರಿವಾಳ ಮಾರಾಟದಲ್ಲಿ ಹಣ ನೀಡುವ ವಿಚಾರದಲ್ಲಿ ಪ್ರಾರಂಭವಾದ ಜಗಳ ಹುಡುಗರನ್ನು ಗುಂಪು ಕಟ್ಟಿಕೊಂಡು ಲಾಂಗು, ಮಚ್ಚು ಹಿಡಿದು ಹೊಡೆದಾಡುವ ಸ್ಥಿತಿ ತಲುಪಿತ್ತು. ಪಟ್ಟಣದ ನಿವಾಸಿಗಳಾದ ಸಂಜು(19), ಕಿಶೋರ(19), ವರ್ಧನ್(19) ಸೇರಿದಂತೆ ಇತರೆ ನಾಲ್ವರು ಬಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.