ತಿಪಟೂರು: ನಗರದ ಆದರ್ಶ ಕ್ಲಿನಿಕ್ನ ವೈದ್ಯ ದಂಪತಿ ಎಂ.ಆರ್. ಪ್ರಕಾಶ್ ಮತ್ತು ಡಾ.ರಾಜೇಶ್ವರಿ ಅವರ ಮೇಲೆ ವ್ಯಕ್ತಿಯೊಬ್ಬ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಬೆಂಕಿ ಹಚ್ಚಲು ಯತ್ನಿಸಿದ ವ್ಯಕ್ತಿ ಮಡೇನೂರು ವಿನಯ್ ಎಂಬುವನಾಗಿದ್ದಾನೆ. ಈತ ಪ್ರಕಾಶ್ ಅವರ ಅಣ್ಣನ ಮಗ ಎಂದು ಪೊಲೀಸರು ಹೇಳಿದ್ದಾರೆ.ವೈಯಕ್ತಿಕ ಕಾರಣದಿಂದ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದಿದೆ.
ಏಕಾಏಕಿ ಆಸ್ಪತ್ರೆ ಬಳಿ ಸೀಮೆಎಣ್ಣೆಹಿಡಿದುಕೊಂಡು ಬಂದ ಆರೋಪಿ ವೈದ್ಯ ದಂಪತಿ ಮೇಲೆ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಆರೋಪಿ ಹಿಡಿದು ವೈದ್ಯ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.