ADVERTISEMENT

ಜಾತ್ಯಾತೀತ ದೇಶಕ್ಕೆ ಜಾತಿ ಗಣತಿ ಏಕೆ ಬೇಕು?: ಸಂಸದ ಡಾ.ಸಿ.ಎನ್.ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 13:54 IST
Last Updated 16 ಏಪ್ರಿಲ್ 2025, 13:54 IST
ಡಾ.ಸಿ.ಎನ್‌. ಮಂಜುನಾಥ್‌
ಡಾ.ಸಿ.ಎನ್‌. ಮಂಜುನಾಥ್‌   

ಕುಣಿಗಲ್ (ತುಮಕೂರು): ಜಾತ್ಯಾತೀತ ದೇಶದಲ್ಲಿ ಜಾತಿ ಗಣತಿ ಅಗತ್ಯವಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷದ ಹಿಂದಿನ ಜಾತಿ ಗಣತಿ ಇಂದಿಗೆ ಅಪ್ರಸ್ತುತ. ಜಾತ್ಯತೀತ ರಾಷ್ಟ್ರದ ಆಶಯಕ್ಕೆ ಜಾತಿ ಗಣತಿ ವಿರುದ್ಧವಾಗಿದೆ ಎಂದರು.

ಎಲ್ಲ ಜಾತಿಗಳಲ್ಲಿ ಹಿಂದುಳಿದವರು ಇದ್ದಾರೆ. ಎಲ್ಲ ಜಾತಿಯ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವರನ್ನು ಗುರುತಿಸಿ ಸೌಲಭ್ಯ ನೀಡಬೇಕಿದೆ. ಜಾತಿಯ ಕಾಲಂನಲ್ಲಿ ಎಲ್ಲರೂ ‘ಭಾರತೀಯ’ ಎಂದು ನಮೂದಿಸಬೇಕಿದೆ ಎಂದು ಸಲಹೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.