ಪಾವಗಡ: ಪಟ್ಟಣದ ಗಂಗಮ್ಮನ ಗುಡಿ ಬೀದಿಯ ರಾಜೇಶ್ ಅವರ ಮನೆಯಲ್ಲಿದ್ದ 70 ಗ್ರಾಂ ಚಿನ್ನದ ಆಭರಣ ಇದ್ದ ಬ್ಯಾಗನ್ನು ಗುರುವಾರ ಕಳವು ಮಾಡಲಾಗಿದೆ.
ಅನ್ಯ ಕಾರ್ಯ ನಿಮಿತ್ತ ಕುಟುಂಬ ಸದಸ್ಯರು ಹೊರ ಹೋಗಿದ್ದಾಗ ಕಳವು ಮಾಡಲಾಗಿದೆ.
ಮನೆಯ ಮುಂದಿನ ಹೂವಿನ ಕುಂಡದ ಬಳಿ ಕೀಲಿ ಕೈ ಇಟ್ಟಿದ್ದನ್ನು ಗಮನಿಸಿದವರೇ ಈ ಕೃತ್ಯ ನಡೆಸಿರಬಹುದು ಎಂದು ಮನೆ ಮಾಲೀಕ ಅನುಮಾನ ವ್ಯಕ್ತಪಡಿಸಿದ್ದಾರೆ.
ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಶೈಲ ಮೂರ್ತಿ, ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.