ತುಮಕೂರು: ನಗರದ ಗೋಕುಲ ಬಡಾವಣೆ ಸಮೀಪ ಶನಿವಾರ ಬೆಳಿಗ್ಗೆ ತಂದೆ ಮತ್ತು ಮಗ ಇಬ್ಬರೂ ಶನಿವಾರ ಬೆಳಿಗ್ಗೆ ಜನಶತಾಬ್ದಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಮರಿಯಪ್ಪ (56), ಸತೀಶ್ (23) ಮೃತಪಟ್ಟವರು. ಗೋಕುಲ ಬಡಾವಣೆಯ ನಿವಾಸಿಗಳಾಗಿದ್ದಾರೆ.
ಮರಿಯಪ್ಪ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಎರಡುವರೆ ವರ್ಷದಿಂದ ಅವರಿಗೆ ಡಯಾಲಿಸಿಸ್ ಮಾಡಿಸಲಾಗುತ್ತಿತ್ತಂತೆ. ಶನಿವಾರ ಡಯಾಲಿಸಿಸ್ಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮರಿಯಪ್ಪ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾರೆ.ಅವರನ್ನು ರಕ್ಷಣೆ ಮಾಡಲು ಮಗ ಹೋದಾಗ ಇಬ್ಬರೂ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ’ ಎಂದು ತುಮಕೂರು ರೈಲ್ವೆ ಪೊಲೀಸ್ ಎಎಸ್ಐ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
'ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್.ಬಿ.ಬಿರಾದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.