ADVERTISEMENT

ಮೀನುಗಾರಿಕೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 3:58 IST
Last Updated 1 ಸೆಪ್ಟೆಂಬರ್ 2021, 3:58 IST
ತುರುವೇಕೆರೆ ತಾಲ್ಲೂಕು ಮಲ್ಲಾಘಟ್ಟ ಕೆರೆ ಆವರಣದಲ್ಲಿ ಮೀನುಗಾರಿಕೆ ಉದ್ಯಮ ಕುರಿತು ಜಾಗೃತಿ ಕಾರ್ಯಗಾರ ನಡೆಯಿತು
ತುರುವೇಕೆರೆ ತಾಲ್ಲೂಕು ಮಲ್ಲಾಘಟ್ಟ ಕೆರೆ ಆವರಣದಲ್ಲಿ ಮೀನುಗಾರಿಕೆ ಉದ್ಯಮ ಕುರಿತು ಜಾಗೃತಿ ಕಾರ್ಯಗಾರ ನಡೆಯಿತು   

ತುರುವೇಕೆರೆ: ಪಟ್ಟಣದ ಮೀನುಗಾರಿಕಾ ಇಲಾಖೆ ಹಾಗೂ ಬಾಣಸಂದ್ರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀನುಗಾರರ ಸಹಕಾರ ಸಂಘದಿಂದ ಕೆರೆ ಸ್ವಚ್ಛತೆ ಮತ್ತು ಮೀನುಗಾರಿಕೆ ಉದ್ಯಮ ಕುರಿತು ಜಾಗೃತಿ ಕಾರ್ಯಗಾರ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮಲ್ಲಾಘಟ್ಟ ಕೆರೆ ಆವರಣದಲ್ಲಿ ಮಂಗಳವಾರ ನಡೆಯಿತು.

ಜಿಲ್ಲಾ ಮೀನುಗಾರಿಕೆ ಉಪ ನಿರ್ದೇಶಕ ವಿಶ್ವನಾಥ್ ಮಾತನಾಡಿ, ತಾಲ್ಲೂಕಿನ ಮೀನುಗಾರರು ಸರ್ಕಾರ ಮತ್ತು ಇಲಾಖೆ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಸಬಲೀಕರಣ ಹೊಂದಬೇಕು. ಜೊತೆಗೆ ಮೀನುಗಾರಿಕೆಯನ್ನು ಒಂದು ಪ್ರಧಾನ ಉದ್ಯಮದ ರೀತಿ ಕಾಣಬೇಕು ಎಂದು ಸಲಹೆ ನೀಡಿದರು.

ಮೀನುಗಾರಿಕೆ ಸಂಶೋಧನಾ ಕೇಂದ್ರದ ಉಪನ್ಯಾಸಕ ಡಾ.ಶಿವಕುಮಾರ್ ಉಪನ್ಯಾಸ ನೀಡಿದರು.

ADVERTISEMENT

ಮೀನುಗಾರರ ಸಹಕಾರ ಸಂಘದ ಪದಾಧಿಕಾರಿಗಳು ಮಲ್ಲಾಘಟ್ಟ ಕೆರೆ ಆವರಣವನ್ನು ಸ್ವಚ್ಛಗೊಳಿಸಿದರು.

ಜಂಟಿ ನಿರ್ದೇಶಕ ಚಿಕ್ಕವೀರ ನಾಯ್ಕ್, ಮೀನುಗಾರಿಕೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಎಸ್.ವಿ.ದೀಪಾಲಿ, ಕಾವ್ಯ, ಪ್ರಕಾಶ್, ಬಾಣಸಂದ್ರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರಯ್ಯ, ಉಪಾಧ್ಯಕ್ಷ ಅನಂತಯ್ಯ, ಸಂಘದ ನಿರ್ದೇಶಕರಾದ ನಾಗರಾಜು, ಮುಖಂಡರಾದ ಈರಣ್ಣ, ಜಗದೀಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.