ADVERTISEMENT

ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹೆಲಿಕಾಪ್ಟರ್‌ ಮೂಲಕ ಹೂವಿನ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 14:46 IST
Last Updated 6 ಡಿಸೆಂಬರ್ 2022, 14:46 IST
   

ತುಮಕೂರು: ಗುಬ್ಬಿ ಪಟ್ಟಣದಲ್ಲಿ ಮಂಗಳವಾರ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಸಾಗುವ ವೇಳೆ ಪಕ್ಷದ ಕಾರ್ಯಕರ್ತರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹೆಲಿಕಾಪ್ಟರ್‌ ಮೂಲಕ ಹೂ ಮಳೆ ಸುರಿಸಿದರು.

ರಥ ಯಾತ್ರೆ ಶಿರಾದಿಂದ ಗುಬ್ಬಿಗೆ ತಲುಪಿತು. ಈ ವೇಳೆ ಕಾರ್ಯಕರ್ತರು ಕೊಬ್ಬರಿ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಕುಮಾರಸ್ವಾಮಿ ಮಾತನಾಡುವ ಸಮಯದಲ್ಲಿ ಹೆಲಿಕಾಪ್ಟರ್‌ ಮೂಲಕ ಗುಲಾಬಿ ಹೂವು ಸುರಿಸಲಾಯಿತು. ಕಾರ್ಯಕರ್ತರು ಜೈಕಾರ ಕೂಗಿದರು.

ಜಿಲ್ಲೆಯಲ್ಲಿ ವಿವಿಧೆಡೆ ರಥಯಾತ್ರೆ ಸಾಗುವ ಸಮಯದಲ್ಲಿ ವಿವಿಧ ರೀತಿಯ ಹಾರಗಳಿಂದ ಕುಮಾರಸ್ವಾಮಿ ಅವರನ್ನು ಸ್ವಾಗತಿಸುತ್ತಿದ್ದಾರೆ. ಈ ಹಿಂದೆ ಸೇಬಿನ ಹಾರ, ರಾಗಿ ತೆನೆಯ ಹಾರ, ನೋಟಿನ ಹಾರ ಹಾಕಲಾಗಿತ್ತು. ರಥ ಯಾತ್ರೆಯಲ್ಲಿ ಇದೇ ಮೊಲದ ಬಾರಿಗೆ ಹೆಲಿಕಾಪ್ಟರ್‌ ಸದ್ದು ಮಾಡಿತು. ಇದನ್ನು ಕಂಡ ಜೆಡಿಎಸ್‌ ಕಾರ್ಯಕರ್ತರು ಮತ್ತು ಗುಬ್ಬಿ ನಿವಾಸಿಗಳು ಶಿಳ್ಳೆ, ಚಪ್ಪಾಳೆ ತಟ್ಟಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.