ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡಣನಾಯ್ಕನಪುರದ ಬೆಟ್ಟದ ಬುಡದಲ್ಲಿ ಸೋಮವಾರ ಸಂಜೆ ಜೂಜಾಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ₹ 45 ಸಾವಿರ ಹಾಗೂ 4 ಬೈಕ್ ವಶಪಡಿಸಿಕೊಂಡಿದ್ದಾರೆ.
ಮಾರನಾಯ್ಕನಪಾಳ್ಯದ ರಾಘವೇಂದ್ರ, ಬಿದಿರುಮೆಳೆ ತೋಟದ ಇಲಿಯಾಸ್, ರಕ್ಷಿತ್, ಕೆಸರುಮಡುವಿನ ನಾಗೇಶ್, ರಾಮನಹಳ್ಳಿಯ ಹೊನ್ನೇಗೌಡ, ದೇವರಾಯಪಟ್ಟಣದ ಯೋಗೀಶ್, ಹನುಮಂತಪುರದ ಗಂಗರಾಜು, ವಿನಯ್ ಕುಮಾರ್, ದೇವನೂರಿನ ಭಾಸ್ಕರ್, ಬಡ್ಡಿಹಳ್ಳಿಯ ಪುನೀತ್, ಶಿರಾಗೇಟ್ ಸಾಡೇಪುರದ ಮಧುಕುಮಾರ್ ಬಂಧಿತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.