ADVERTISEMENT

ಜೂನ್ 12ರಂದು ಮಣಿಚೆಂಡೂರು ಕಾಳಘಟ್ಟಮ್ಮ, ಪಥರಾಜೇಶ್ವರ ದೇಗುಲ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:13 IST
Last Updated 11 ಜೂನ್ 2025, 14:13 IST
ತುರುವೇಕೆರೆ ತಾಲ್ಲೂಕು ಮಣಿಚೆಂಡೂರು ಕಾಳಘಟ್ಟಮ್ಮ, ಪಾಥರಾಜೇಶ್ವರ ದೇಗುಲ
ತುರುವೇಕೆರೆ ತಾಲ್ಲೂಕು ಮಣಿಚೆಂಡೂರು ಕಾಳಘಟ್ಟಮ್ಮ, ಪಾಥರಾಜೇಶ್ವರ ದೇಗುಲ   

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ ಮಣಿಚೆಂಡೂರಿನ ಕಾಳಘಟ್ಟಮ್ಮ ದೇವಿ ಮತ್ತು ಪಾಥರಾಜೇಶ್ವರ ದೇವಾಲಯದ ಪುನರ್‌ ಪ್ರತಿಷ್ಠಾಪನೆ ಮತ್ತು ಕುಂಬಾಭೀಷೇಕ ಜೂನ್ 12 ಮತ್ತು 13 ರಂದು ನಡೆಯಲಿದೆ.

ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಮೂಲಸ್ಥಾನದಿಂದ 108 ಕಳಸ ನಿರ್ಮಿಸಿ ದೇವಾಲಯ ಪ್ರವೇಶ, ಸಂಜೆ ಗೋಧೂಳಿ ಲಗ್ನದಲ್ಲಿ ಗಣಹೋಮ, ವಾಸ್ತು ಹೋಮ, ವಾಸ್ತು ಬಲಿ, ಗ್ರಾಮ ಪರಿವಾರ ಹೋಮ ನಡೆಯಲಿದೆ.

ಶುಕ್ರವಾರ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚೀದೇವ ಸ್ವಾಮೀಜಿ ಭಾಗವಹಿಸಲಿದ್ದಾರೆ. ಸಚಿವ ವಿ.ಸೋಮಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.