ತುಮಕೂರು: ನಗರದ ರಿಂಗ್ ರಸ್ತೆಯಲ್ಲಿರುವ ಕೆಎಚ್ಬಿ ಕಾಲೊನಿಯ ತಿರುಮಲನಗರದ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಯೋಗಿ ನಾರಾಯಣ ಯತೀಂದ್ರರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಮರ ನಾರಾಯಣ ಸಮುದಾನ ಭವನದ ಉದ್ಘಾಟನಾ ಸಮಾರಂಭ ಮೇ 2 ರಂದು ಬೆಳಿಗ್ಗೆ 11.45ಕ್ಕೆ ನೆರವೇರಲಿದೆ.
ಕೈವಾರ ಯೋಗಿ ನಾರಾಯಣ ಯತೀಂದ್ರರ ಮೂರ್ತಿ ಪ್ರತಿಷ್ಠಾಪನಾ ಕಾರ್ಯವನ್ನು ಧರ್ಮಾಧಿಕಾರಿ ಟಿ.ಆರ್.ವೆಂಕಟೇಶ್ ನೆರವೇರಿಸುವರು. ಬೆಂಗಳೂರಿನ ನ್ಯೂ ಬಾಲ್ಡ್ವಿನ್ ಶಾಲೆ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ಪೂಜೆ ಸಲ್ಲಿಸುವರು. ಡಾ.ಬಿ.ಸಿ.ಸಂಜೀವಯ್ಯ ವಿಗ್ರಹ ಅನಾವರಣ ಮಾಡುವರು. ಡಾ.ಎಂ.ವಿ.ಶ್ರೀನಿವಾಸ್ ಕಳಸ ಸ್ಥಾಪಿಸುವರು.
ಚಾಮುಂಡೇಶ್ವರಿ ಕ್ಷೇತ್ರದ ಧರ್ಮಾಧಿಕಾರಿ ಬಿ.ಎಂ.ರವಿನಾಯ್ದು ಸಮುದಾಯ ಭವನ ಉದ್ಘಾಟಿಸುವರು. ಧರ್ಮಾಧಿಕಾರಿ ಎ.ಆರ್.ಚಿಕ್ಕರಂಗಯ್ಯ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.