ADVERTISEMENT

ತುರುವೇಕೆರೆ: ಫೆ.6ಕ್ಕೆ ಕಣಕೂರಿನಲ್ಲಿ ಲಕ್ಷ್ಮಿ ವೆಂಕಟರಮಣ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:28 IST
Last Updated 29 ಜನವರಿ 2026, 6:28 IST
ಲಕ್ಷ್ಮಿ ವೇಂಕಟೇಶ್ವರ ದೇಗುಲ
ಲಕ್ಷ್ಮಿ ವೇಂಕಟೇಶ್ವರ ದೇಗುಲ   

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ ಕಣಕೂರು ಗ್ರಾಮದಲ್ಲಿ ಬಾಲಾಜಿ ಸೇವಾ ಟ್ರಸ್ಟ್‌, ಕಣಕೂರು ಗ್ರಾಮಸ್ಥರು, ಭಕ್ತರಿಂದ ಫೆಬ್ರುವರಿ 6ರಂದು ಲಕ್ಷ್ಮಿ ವೆಂಕಟರಮಣ ಕಲ್ಯಾಣೋತ್ಸವ ನಡೆಯಲಿದೆ ಎಂದು ಬಾಲಾಜಿ ಸೇವಾ ಟ್ರಸ್ಟ್‌ ಅಧ್ಯಕ್ಷ ಬಾಲಾಜಿ ಕುಮಾರ್‌ ತಿಳಿಸಿದರು.

₹1 ಕೋಟಿಗೂ ಅಧಿಕ ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ. ಭಕ್ತರಿಗೆ ತಿರುಪತಿ ದೇವಾಲಯದ ಲಾಡು, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಫೆ. 4, 5 ಮತ್ತು 6ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಕಣಕೂರು ಚಂದ್ರಶೇಖರ್‌, ಟಿ.ಜವರಪ್ಪ, ಕೆ.ಎಸ್.ಗಂಗಯ್ಯ, ಕೆ.ಟಿ.ತಿಮ್ಮಯ್ಯ, ಕೆ.ಸಿ.ಸಿದ್ದೇಗೌಡ, ಕೆ.ಎಲ್.ರಾಜು, ಪಿಎಸಿಎಸ್‌ ನ ಅಧ್ಯಕ್ಷ ಕೆ.ಶ್ರೀನಿವಾಸ್‌, ದೇವಾಲಯಗಳ ಅರ್ಚಕರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.