ತುಮಕೂರು: ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಸಿಲಿನ ತಾಪಕ್ಕೆ ಕಾದ ಕಾವಲಿಯಂತಾಗಿದ್ದ ನಗರದಲ್ಲಿ ಭಾನುವಾರ ಮಳೆಯು ತಂಪೆರೆಯಿತು.
ರಾತ್ರಿ 7.30ಕ್ಕೆ ಆರಂಭವಾದ ಮಳೆ ಆಗಾಗ್ಗೆ ಬಿಡುವು ಪಡೆದು 9 ಗಂಟೆಯವರೆಗೂ ಸುರಿಯಿತು. ಗುಡುಗು, ಗಾಳಿ ಸಹಿತ ಮಳೆಯಾದ ಕಾರಣ ಜನರು ಮನೆಯ ಒಳಗಿದ್ದೇ ತಣ್ಣನೆಯ ಅನುಭೂತಿ ಪಡೆದರು. ಮಣ್ಣಿನ ವಾಸನೆ ಘಮ್ಮೆಂದಿತು. ರಸ್ತೆಯಲ್ಲಿ ವಾಹನಗಳನ್ನು ತಡೆದು ವಿಚಾರಣೆ ನಡೆಸುತ್ತಿದ್ದ ಪೊಲೀಸರು ಸಮೀಪದ ಅಂಗಡಿ ಮಳಿಗೆಗಳ ಬಳಿ ಆಶ್ರಯ ಪಡೆದರು. ಬೇಸಿಗೆಯ ಈ ದಿನಗಳಲ್ಲಿ ಸುರಿದ ಮಳೆ ನಗರದ ಜನರಿಗೆ ಆಹ್ಲಾದವನ್ನು ತಂದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.