ADVERTISEMENT

ತುಮಕೂರು: 30ಕ್ಕೆ ರಂಗನಾಥ ಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:46 IST
Last Updated 28 ಮಾರ್ಚ್ 2023, 5:46 IST

ಶಿರಾ: ತಾಲ್ಲೂಕಿನ ಗಿಡಗನಹಳ್ಳಿಯಲ್ಲಿ ಇದೇ 30ರಿಂದ ಏಪ್ರಿಲ್‌ 3ರ ವರೆಗೆ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಮಾರ್ಚ್‌ 30ರಂದು ಬೆಳಿಗ್ಗೆ 7ಗಂಟೆಗೆ ಸ್ವಾಮಿಯ ಗಂಗಾಸ್ನಾನ, ರಾತ್ರಿ 9 ಗಂಟೆಗೆ ಮಡಿತೇರು ನೆರವೇರಲಿದೆ. 31ರಂದು ರಾತ್ರಿ 9ಗಂಟೆಗೆ ಗರುಡೋತ್ಸವ (ದವನೋತ್ಸವ) ಇದೆ.

ಏಪ್ರಿಲ್‌ 1ರಂದು ರಾತ್ರಿ 9 ಗಂಟೆಗೆ ಕಲ್ಲುಗಾಲಿ ರಥೋತ್ಸವ ನಡೆಯಲಿದೆ. ಏಪ್ರಿಲ್ 2ರಂದು ರಾತ್ರಿ 9 ಗಂಟೆಗೆ ಗಜಪತಿ ಮೇಲೆ ಸ್ವಾಮಿ ಉತ್ಸವ, ಮಾರ್ಚ್‌ 3ರಂದು ರಾತ್ರಿ 10 ಗಂಟೆಗೆ ಹನುಮಂತನ ಮೇಲೆ ಸ್ವಾಮಿಯ ಉತ್ಸವ (ಹೂವಿನ ರಥೋತ್ಸವ) ಅದ್ದೂರಿಯಾಗಿ ನೆರವೇರಲಿದೆ. ಅಂದು ಬರುವ ಭಕ್ತರಿಗೆ ಬೆಳಿಗ್ಗೆ ಉಪಾಹಾರದ ವ್ಯವಸ್ಥೆ, ರಾತ್ರಿ ಹರಿಸೇವೆ (ಅನ್ನ ಸಂತರ್ಪಣೆ) ನಡೆಯಲಿದೆ. ಮಧ್ಯಾಹ್ನ 2ಕ್ಕೆ ಉಂಡೆ ಮಂಡೆ ಸೇವೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.