ADVERTISEMENT

ರೇಷ್ಮೆ ಕೃಷಿ ಲಾಭದಾಯಕ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:34 IST
Last Updated 26 ಸೆಪ್ಟೆಂಬರ್ 2022, 16:34 IST
ತುಮಕೂರಿನಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಅಮೃತ ರೇಷ್ಮೆ ಉತ್ಪಾದಕರ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ರೇಷ್ಮೆ ಇಲಾಖೆ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎಚ್.ರಮೇಶ್, ಉಪಾಧ್ಯಕ್ಷ ರಾಜಕುಮಾರ, ನಬಾರ್ಡ್‌ ಡಿಜಿಎಂ ಕೀರ್ತಿಪ್ರಭಾ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಅಮೃತ ರೇಷ್ಮೆ ಉತ್ಪಾದಕರ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ರೇಷ್ಮೆ ಇಲಾಖೆ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎಚ್.ರಮೇಶ್, ಉಪಾಧ್ಯಕ್ಷ ರಾಜಕುಮಾರ, ನಬಾರ್ಡ್‌ ಡಿಜಿಎಂ ಕೀರ್ತಿಪ್ರಭಾ ಉಪಸ್ಥಿತರಿದ್ದರು   

ತುಮಕೂರು: ಕಳೆದ ವರ್ಷ ಕನಿಷ್ಠ 1 ಸಾವಿರ ಹೆಕ್ಟೇರ್ ರೇಷ್ಮೆ ಬೆಳೆ ವಿಸ್ತರಣೆಯ ಗುರಿ ನಿಗದಿಪಡಿಸಿದ್ದು, ಇಲಾಖೆಯಿಂದ ಜಿಲ್ಲೆಯಲ್ಲಿ 1,125 ಹೆಕ್ಟೇರ್ ವಿಸ್ತರಣೆ ಮಾಡಲಾಗಿದೆ. 1 ಸಾವಿರ ಬೆಳೆಗಾರರುಹೊಸದಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ವೈ.ಕೆ. ಬಾಲಕೃಷ್ಣಪ್ಪ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ತಾಲ್ಲೂಕು ಅಮೃತ ರೇಷ್ಮೆ ಉತ್ಪಾದಕರ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

‘ಪ್ರಸಕ್ತ ಸಾಲಿನಲ್ಲಿ 1,500 ಹೆಕ್ಟೇರ್ ರೇಷ್ಮೆ ವಿಸ್ತರಣೆಯ ಗುರಿ ನೀಡಿದ್ದು, ಈಗಾಗಲೇ 950‌ ಹೆಕ್ಟೇರ್ ಗುರಿ‌ ಸಾಧಿಸಲಾಗಿದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ 800 ಕೆ.ಜಿರೇಷ್ಮೆ ಗೂಡು ಬೆಳೆಯಲಾಗುತ್ತಿದೆ. ಇದೇ ವಾತಾವರಣದಲ್ಲಿ ಗರಿಷ್ಠ 1 ಸಾವಿರಕೆ.ಜಿಗೂಡು ಬೆಳೆಯುವ ಎಲ್ಲ ತಾಂತ್ರಿಕತೆ ನಮ್ಮಲ್ಲಿದೆ. ಇದನ್ನು ರೈತರು ಬಳಸಿಕೊಳ್ಳಬೇಕು’ ಎಂದರು.

ADVERTISEMENT

ನಬಾರ್ಡ್‌ ಡಿಜಿಎಂ ಕೀರ್ತಿಪ್ರಭಾ, ‘ರೈತರು ಬೆಳೆಯಲ್ಲಿ ಉತ್ತಮ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಸಂಘದ ಬೆಳವಣಿಗೆಯದೃಷ್ಟಿಯಿಂದ ಎಲ್ಲ ಬೆಳೆಗಾರರು ಷೇರುದಾರರಾಗುವ ಮೂಲಕ ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಡಾ.ಕೆ.ಆರ್. ಶಶಿಧರ್‌, ಹಿಪ್ಪುನೇರಳೆ ಗಿಡದ ಕೀಟ ಬಾಧೆ ಮತ್ತು ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಸಂಸ್ಥೆ ಅಧ್ಯಕ್ಷ ಎಚ್. ರಮೇಶ್, ಉಪಾಧ್ಯಕ್ಷ ರಾಜಕುಮಾರಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.