ADVERTISEMENT

ಇಂದು ಡಿಕೆಶಿ, ಗೌಡರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:04 IST
Last Updated 27 ಅಕ್ಟೋಬರ್ 2020, 4:04 IST

ಶಿರಾ: ಉಪಚುನಾವಣೆ ಹಿನ್ನೆಲೆಯಲ್ಲಿ ಅ. 27ರಂದು ರಾಜಕೀಯ ಪಕ್ಷಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಇಂತಿವೆ.

ಕಾಂಗ್ರೆಸ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಾಲ್ಲೂಕಿನ ಭುವನಹಳ್ಳಿ, ಸೊರೆಕುಂಟೆ, ಪಂಜಿಗಾನಹಳ್ಳಿ, ದ್ವಾರಾಳು ಗೇಟ್, ಚನ್ನನಕುಂಟೆ, ಹೊನ್ನಗೊಂಡನಹಳ್ಳಿ, ಮಾಗೋಡು, ಯರಗುಂಟೆ ಗೇಟ್, ಗುಳಿಗೇನಹಳ್ಳಿ, ತಗ್ಗಿಹಳ್ಳಿ, ಪದ್ಮಾಪುರ, ದೊಡ್ಡಗೂಳ, ಕಡವಿಗೆರೆ ಹಾಗೂ ಯಲಿಯೂರು ಗೇಟ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ.

ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಖಂಡ ಎಚ್.ಎಂ. ರೇವಣ್ಣ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ADVERTISEMENT

ಬಿಜೆಪಿ:ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜು ಅವರಿಂದ ಪತ್ರಿಕಾಗೋಷ್ಠಿ ಇದೆ.

ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10:30ಕ್ಕೆ ದಲಿತ ಮುಖಂಡರ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 11:30ಕ್ಕೆ ಹಳ್ಳಿಕಾರ್ ಒಕ್ಕಲಿಗರ ಯುವ ಸಮಾವೇಶ, ಮಧ್ಯಾಹ್ನ 2ಗಂಟೆಗೆ ಕಾಡುಗೊಲ್ಲರ ಯುವಕರ ಸಮಾವೇಶ, ಸಂಜೆ 4ಕ್ಕೆ ಕುಂಚಿಟಿಗ ಒಕ್ಕಲಿಗರ ಯುವ ಮುಖಂಡರು ಸಮಾವೇಶ ಹಮ್ಮಿಕೊಂಡಿದ್ದಾರೆ.

ಜೆಡಿಎಸ್: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ‌ ಅವರು ತಾವರೆಕೆರೆ, ಬಂದಕುಂಟೆ ಹಾಗೂ ಕಾಮಗೊಂಡನಹಳ್ಳಿಯಲ್ಲಿ ಬಹಿರಂಗ ಸಭೆ ನಡೆಸಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.