ತುಮಕೂರು: ಇಲ್ಲಿನ ಮರಳೂರು ಇನ್ನರ್ವೀಲ್ ಕ್ಲಬ್ನಿಂದ ದುರ್ಗದಹಳ್ಳಿ ಮತ್ತು ಲಕ್ಷ್ಮಿಪುರ ತಾಂಡಾಗಳ ಜನರಿಗೆ ಸೌರದೀಪ ಮತ್ತು ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
‘ಕ್ಲಬ್ ಈಗಾಗಲೇ ಗ್ರಾಮೀಣ ಜನರಿಗೆ ನೆರವಾಗುವ ದಿಕ್ಕಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಗ್ರಾಮಗಳ 20 ಮಂದಿಗೆ ಸೌರದೀಪವನ್ನು ವಿತರಿಸಲಾಗಿದೆ’ ಎಂದು ಕ್ಲಬ್ ಅಧ್ಯಕ್ಷೆ ಪ್ರಿಯಾ ಪ್ರದೀಪ್ ತಿಳಿಸಿದರು.
ದುರ್ಗದಹಳ್ಳಿಯ ವಿದ್ಯಾಶಂಕರ ದೇವಸ್ಥಾನದ ಬಳಿ ವಿವಿಧ ಜಾತಿಯ 50 ಹಣ್ಣಿನ ಸಸಿಗಳನ್ನು ಇದೇ ವೇಳೆ ನೆಡಲಾಯಿತು.
ಬೆಂಗಳೂರಿನ ಐಡಬ್ಲ್ಯುಸಿ ಅಧ್ಯಕ್ಷೆ ಪ್ರೇಮಾ ಅಯ್ಯರ್, ಕ್ಲಬ್ ಸದಸ್ಯರು ಹಾಗೂ ಗ್ರಾಮಸ್ಥರು
ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.