ADVERTISEMENT

ರೈಲಿಗೆ ಸಿಲುಕಿ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 19:02 IST
Last Updated 17 ಮಾರ್ಚ್ 2019, 19:02 IST

ತುಮಕೂರು: ನಗರದ ಶೆಟ್ಟಿ ಹಳ್ಳಿ ರೈಲ್ವೆ ಗೇಟ್ ಸಮೀಪ ಶನಿವಾರ ಸಂಜೆ ವಿದ್ಯಾರ್ಥಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಟಿ.ಜಿ.ಭರತ್ (18) ಮೃತಪಟ್ಟ ವಿದ್ಯಾರ್ಥಿ. ತುಮಕೂರು ವಿಶ್ವವಿದ್ಯಾನಿಲಯದ ಜೀವ ರಸಾಯನವಿಜ್ಞಾನ ವಿಭಾಗದ ಪ್ರಾಧ್ಯಾಪಕ ಟಿ.ಜಿ.ತಿಪ್ಪೇಸ್ವಾಮಿ ಅವರ ಹಿರಿಯ ಪುತ್ರ. ನಗರದ ಶ್ರೀಚೈತನ್ಯ ಕಾಲೇಜಿನ ವಿಜ್ಞಾನ ವಿಭಾಗದದ್ವಿತೀಯ ಪಿಯುಸಿವಿದ್ಯಾರ್ಥಿಯಾಗಿದ್ದ.

ರೈಲ್ವೆ ಹಳಿ ಆಚೆ ಇರುವ ಅಂಗಡಿಗೆ ಹೋಗುವಾಗ ಹಳಿ ದಾಟುವವೇಳೆ ಗೂಡ್ಸ್ ರೈಲಿಗೆ ಸಿಲುಕಿಮೃತಪಟ್ಟಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಹರಡಿದ ವದಂತಿ: ‘ಜೀವವಿಜ್ಞಾನ ವಿಷಯ ಕಠಿಣವಾಗಿತ್ತು. ಕಡಿಮೆ ಅಂಕ ಬರುತ್ತವೆ ಎಂದು ಆತಂಕಗೊಂಡು ಮನೆ ಸಮೀಪ ಇರುವ ರೈಲುಹಳಿ ಬಳಿ ಹೋಗಿ ಚಲಿಸುವರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂಬ ವದಂತಿ ಹರಡಿತ್ತು.ಆದರೆ, ಪೋಷಕರು, ಪ್ರಾಧ್ಯಾಪಕರು ಇದನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.