ADVERTISEMENT

ದೇವಾಲಯದ ಶೆಟರ್‌ ಮುರಿದು ವಿಗ್ರಹ ಕಳವು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 1:25 IST
Last Updated 12 ಸೆಪ್ಟೆಂಬರ್ 2020, 1:25 IST

ಕುಣಿಗಲ್: ತಾಲ್ಲೂಕಿನ ಬಿದನಗೆರೆ ಗ್ರಾಮದ ತೋಪಿನ ರಂಗಸ್ವಾಮಿ ದೇವಾಲಯದ ಶೆಟರ್ ಮುರಿದು ಒಳ ಪ್ರವೇಶಿಸಿದ ಕಳ್ಳರು ನಾಲ್ಕು ಪಂಚಲೋಹದ ವಿಗ್ರಹಗಳನ್ನು ಕದ್ದಿದ್ದಾರೆ.

ದೇವಾಲಯ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಗೆ ಹೊಂದಿಕೊಂಡಿದೆ. ಕಳ್ಳರು ಗುರುವಾರ ರಾತ್ರಿ ರಸ್ತೆ ಬದಿಯ ವಿದ್ಯುತ್ ಕಂಬದಿಂದ ಅಕ್ರಮವಾಗಿ ಸಂಪರ್ಕ ಪಡೆದು ದೇವಾಲಯದ ಗ್ರೀಲ್ ಮತ್ತು ಶೆಟರ್‌ಗಳನ್ನು ಕಟ್ಟರ್ ಬಳಸಿ ಮುರಿದು ಒಳ ಪ್ರವೇಶಿಸಿ ವಿಗ್ರಹ ಕದ್ದಿದ್ದಾರೆ.

ಅರ್ಚಕ ರಂಗಸ್ವಾಮಿ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಬಿದನಗೆರೆ ತೋಪಿನ ರಂಗಸ್ವಾಮಿ ದೇವಾಲಯದಲ್ಲಿ ನಾಲ್ಕನೆ ಬಾರಿಗೆ ಕಳ್ಳತನ ನಡೆದಿದೆ. ತಾಲ್ಲೂಕಿನಲ್ಲಿ ಜಾನುವಾರು ಕಳ್ಳತನ, ಮನೆಗಳ್ಳತನ, ದೇವಾಲಯಗಳಲ್ಲಿ ಕಳ್ಳತನ, ಸರಗಳ್ಳತನ ಪ್ರಕರಣ ನಿರಂತರವಾಗಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಾಲಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿದೆ ಪೊಲೀಸರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.