ADVERTISEMENT

ತುಮಕೂರು: ಮತ್ತೆ ಒಡೆದ ಕೆರೆ ಏರಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 5:35 IST
Last Updated 19 ಮೇ 2022, 5:35 IST
   

ತುಮಕೂರು: ಬುಧವಾರ ರಾತ್ರಿ ಬಿದ್ದ ಮಳೆಗೆ ಶಿರಾ ತಾಲ್ಲೂಕು ಯಾದಲಡಕು ಗ್ರಾಮದ ಕೆರೆ ಏರಿ ಮತ್ತೆ ಒಡೆದು ಹೋಗಿದೆ.

ಕಳೆದ ಏಳು ವರ್ಷಗಳಿಂದಲೂ ಈ ಕೆರೆ ಏರಿಯನ್ನು ದುರಸ್ತಿ ಮಾಡುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆರೆಯಲ್ಲಿ ನೀರು ಸಂಗ್ರಹ ಆಗುತ್ತಿದೆ ಎನ್ನುವಾಗಲೇ ಕೆರೆ ಏರಿ ಒಡೆದಿದೆ.

ಕಳೆದ ವರ್ಷ ಕಳಪೆ ಕಾಮಗಾರಿ ಮಾಡಿದ್ದರಿಂದ ಒಡೆದು ಹೋಗಿತ್ತು. ಈಗ ಮತ್ತೆ ಪುನರಾವರ್ತನೆಯಾಗಿದೆ. ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.