ADVERTISEMENT

ಗ್ರಾಹಕರಿಗೆ ಸ್ಪಂದಿಸದ ಬ್ಯಾಂಕ್: ಆರೋಪ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 9:07 IST
Last Updated 10 ಜೂನ್ 2020, 9:07 IST

ತಿಪಟೂರು: ‘ತಮ್ಮ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಲು ತಾಲ್ಲೂಕಿನ ಗುರುಗದಹಳ್ಳಿ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಸಹಕರಿಸುತ್ತಿಲ್ಲ. ತಿಂಗಳುಗಟ್ಟಲೇ ಬ್ಯಾಂಕ್‍ಗೆ ಅಲೆಸುತ್ತಿದ್ದಾರೆ’ ಎಂದು ಗ್ರಾಹಕರು ದೂರಿದ್ದಾರೆ.

ಬ್ಯಾಂಕ್‌ ಶಾಖೆಯಲ್ಲಿ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರು ಖಾತೆ ತೆರೆದಿದ್ದಾರೆ. ಆದರೆ ನಿರಂತರವಾಗಿ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸಿಲ್ಲ. ಆರು ತಿಂಗಳು, ವರ್ಷದ ನಂತರ ಬರುವ ಗ್ರಾಹಕರಿಗೆ ಖಾತೆತಾತ್ಕಾಲಿಕವಾಗಿ ಸ್ಥಗಿತವಾಗಿದೆ ಎನ್ನುತ್ತಿದ್ದಾರೆ. ಚಾಲನೆ ನೀಡಲು ಹೇಳಿದರೆ ತಾಂತ್ರಿಕ ಕಾರಣ ಹೇಳಿ ನಾಳೆ ಬನ್ನಿ ಎನ್ನುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಗ್ರಾಹಕರ ಖಾತೆಗೆ ಚಾಲನೆ ನೀಡುವಂತೆ ಗುಮಾಸ್ತರಿಗೆ ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ವ್ಯವಸ್ಥಾಪಕರಾದ ಸುಶ್ಮಿತಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.