ADVERTISEMENT

ಆರೋಗ್ಯ ಕುರಿತ ವಂದತಿಗೆ ಶಿರಾ ಶಾಸಕ ಗರಂ

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:08 IST
Last Updated 20 ಮೇ 2019, 20:08 IST
ಬಿ.ಸತ್ಯನಾರಾಯಣ
ಬಿ.ಸತ್ಯನಾರಾಯಣ   

ತುಮಕೂರು: ‘ನನ್ನ ಕ್ಷೇತ್ರದ ಆತ್ಮೀಯ ನಾಗರಿಕ ಬಂಧುಗಳೆ, ಪಕ್ಷದ ಕಾರ್ಯಕರ್ತ ಬಂಧುಗಳೆ. ನನ್ನ ಆರೋಗ್ಯದ ಕುರಿತು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಊಹಾಪೋಹಕ್ಕೆ ಕಿವಿಗೊಡಬೇಡಿ’.

ಇದು ಶಿರಾ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕ್ಷೇತ್ರದ ಜನರಿಗೆ, ಬೆಂಬಲಿಗರಿಗೆ ಮಾಡಿದ ಮನವಿ ಇದು. ಭಾನುವಾರ ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಈ ಸಂದೇಶ ಹಾಕಿದ್ದಾರೆ.

'ಕಿಡಿಗೇಡಿಗಳು ಹಾಕಿರುವ ಸುಳ್ಳು ಸುದ್ದಿ ನಂಬಬೇಡಿ. ನಾನು ಆರೋಗ್ಯದಿಂದಿದ್ದು, ಕ್ಷೇತ್ರದ ದೈನಂದಿನ ಕಾರ್ಯಕಲಾಪಗಳಲ್ಲಿ ತೊಡಗಿಸಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.