ತುಮಕೂರು: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಸಿದ್ಧಾರ್ಥ ಡೆಂಟಲ್ ಕಾಲೇಜು ಸಮೀಪಬುಧವಾರ ಬೆಳಿಗ್ಗೆ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ನೇಹಿತರು ಮೃತಪಟ್ಟಿದ್ದಾರೆ.
ಲುಕ್ಸಾನ್ (20) ಹಾಗೂ ಅಪ್ರೋಜ್ (18) ಮೃತಪಟ್ಟವರು. ಲುಕ್ಸಾನ್ ನಗರದ ಸದಾಶಿವನಗರ ನಿವಾಸಿಯಾಗಿದ್ದು, ತನ್ನ ಸ್ನೇಹಿತ ಹೆಗ್ಗೆರೆ ನಿವಾಸಿ ಅಪ್ರೋಜ್ ಮನೆಗೆ ಪ್ರತಿ ದಿನವೂ ಬೆಳಗಿನ ಜಾವ ತೆರಳಿ ರಂಜಾನ್ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇಂದೂ ಸಹ ಪ್ರಾರ್ಥನೆ ಸಲ್ಲಿಸಿ, ಊಟ ಮುಗಿಸಿ ಮನೆಯಿಂದ ಹೊರಟಿದ್ದಾರೆ. ಸ್ನೇಹಿತನನ್ನು ಬಿಟ್ಟು ಬರಲು ಅಪ್ರೋಜ್ ಬೈಕ್ನಲ್ಲಿ ತೆರಳುತ್ತಿದ್ದಾಗ ತುಮಕೂರು ಕಡೆಯಿಂದ ಎದುರಿಗೆ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ನಡೆದ ಸಮಯದಲ್ಲಿ ಯಾವೆಲ್ಲ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಿವೆ ಎಂಬ ಮಾಹಿತಿಯನ್ನು ಸಿ.ಸಿ ಟಿ.ವಿ ಪರಿಶೀಲಿಸಿ ಪೊಲೀಸರು ಕಲೆ ಹಾಕುತ್ತಿದ್ದಾರೆ. ಶೀಘ್ರ ಅಪಘಾತ ಮಾಡಿದ ವಾಹನ ಪತ್ತೆಹಚ್ಚುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.