ಶಿರ್ವ: ನೆರೆಯ ನೀರಿನಿಂದ ಗ್ರಾಮದ ಸಂಪರ್ಕ ರಸ್ತೆ ಜಲಾವೃತಗೊಂಡು ಶವ ಸಾಗಿಸುವ ವಾಹನ ಗ್ರಾಮದೊಳಗೆ ಬಾರದ ಕಾರಣಕ್ಕೆ ಕಾಪು ತಾಲ್ಲೂಕಿನ ಮಟ್ಟು ದೇವರಕುದ್ರು ಗ್ರಾಮಸ್ಥರು ನೆರೆಯ ನೀರಿನಲ್ಲಿಯೇ ಅರ್ಧ ಕಿ.ಮೀ ಶವವನ್ನು ಹೊತ್ತೊಯ್ದರು.
ರಾಮಪ್ಪ ಕುಂದರ್ ಎಂಬುವರ ಪತ್ನಿ ಬೇಬಿ ಪೂಜಾರಿ ನಿಧನರಾಗಿದ್ದು, ಮಟ್ಟು ದೇವರಕುದ್ರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಭಾರಿ ಮಳೆಗೆ ಜಲಾವೃತಗೊಂಡಿತ್ತು. ಪರಿಣಾಮ ಗ್ರಾಮದೊಳಗೆ ವಾಹನ ಬರಲು ಅಡ್ಡಿಯಾಗಿತ್ತು. ಬಳಿಕ ಗ್ರಾಮಸ್ಥರೇ ನೆರೆಯ ನೀರಿನಲ್ಲಿ ಶವವನ್ನು ಹೊತ್ತು ವಾಹನದ ಬಳಿ ಕೊಂಡೊಯ್ದರು. ಬಳಿಕ ಕೋಟೆ ಗ್ರಾಮ ಪಂಚಾಯಿತಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.