ADVERTISEMENT

ಕಲ್ಯಾಣಪುರ: ಸರ್ಕಾರಿ ಶಾಲೆಗೆ ₹ 28 ಲಕ್ಷದ ಸಾಮಗ್ರಿ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 12:32 IST
Last Updated 28 ಏಪ್ರಿಲ್ 2025, 12:32 IST
ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ದೇವ ಆನಂದ್, ರಾಜಾರಾಮ ಭಟ್, ಬಿ.ಎಂ.ಭಟ್, ಶಬನಾ ಅಂಜುಂ ಮತ್ತಿತರರು ಪಾಲ್ಗೊಂಡಿದ್ದರು
ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ದೇವ ಆನಂದ್, ರಾಜಾರಾಮ ಭಟ್, ಬಿ.ಎಂ.ಭಟ್, ಶಬನಾ ಅಂಜುಂ ಮತ್ತಿತರರು ಪಾಲ್ಗೊಂಡಿದ್ದರು   

ಬ್ರಹ್ಮಾವರ: ಕಲ್ಯಾಣಪುರ ರೋಟರಿ ಕ್ಲಬ್ ಆಶ್ರಯದಲ್ಲಿ ಗ್ಲೋಬಲ್‌ ಗ್ರ್ಯಾಂಟ್ ಮೂಲಕ ಬಾಳುದ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹ 28 ಲಕ್ಷ ಮೊತ್ತದ ಕೊಡುಗೆಗಳನ್ನು ರೋಟರಿ ಜಿಲ್ಲಾ ಗವರ್ನರ್ ದೇವ ಆನಂದ್ ಈಚೆಗೆ ಹಸ್ತಾಂತರಿಸಿದರು.

ಕಂಪ್ಯೂಟರ್ ಲ್ಯಾಬ್, ಶಾಲಾ ವಾಹನ, ಪೀಠೋಪಕರಣ, ಶುದ್ಧ ಕುಡಿಯುವ ನೀರಿನ ಘಟಕ, ಬಿಸಿಯೂಟ ಬಡಿಸುವ ಪರಿಕರ, ಕ್ರೀಡಾ ಸಾಮಗ್ರಿ, ಸ್ಮಾರ್ಟ್ ಕ್ಲಾಸ್, ಕೈ ತೊಳೆಯುವ ಘಟಕ, ಸಿಸಿಟಿವಿ ಕ್ಯಾಮೆರಾಗಳು ಕೊಡುಗೆಗಳಲ್ಲಿ ಒಳಗೊಂಡಿವೆ. 

ರೋಟರಿ ಮಾಜಿ ಜಿಲ್ಲಾ ಗವರ್ನರ್ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ರಾಜಾರಾಮ ಭಟ್ ವಾಹನ ಹಸ್ತಾಂತರಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಲೋಕ್ರೆ ಮಾತನಾಡಿದರು. ವಸಂತ ಪ್ರಭು ಅವರು ಗ್ಲೋಬಲ್‌ ಗ್ರ್ಯಾಂಟ್‌ಗೆ ಸಹಕಾರ ನೀಡಿದ್ದರು.

ADVERTISEMENT

ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ಬ್ರಹ್ಮಾವರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಂ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ, ಮುಖ್ಯ ಶಿಕ್ಷಿಕಿ ಕುಸುಮಾ, ಸಿಆ‌ರ್‌ಪಿ ಮಾಲಿನಿ, ಎಸ್‌ಡಿಎಂಸಿ ಅಧ್ಯಕ್ಷ ಸುಭಾಷ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಉಡುಪ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕಾಂತ, ಪ್ರಮುಖರಾದ ಇಬ್ರಾಹಿಂ ಸಾಹೇಬ್, ಅಲೆನ್ ಲೂವೀಸ್, ನಾರಾಯಣ ಪಿ, ಬಿ.ಸಿ ಗೀತಾ, ರಾಘವೇಂದ್ರ ಸಾಮಗ, ಶಂಕರ ಸುವರ್ಣ, ಜ್ಞಾನವಸಂತ ಶೆಟ್ಟಿ ಪಾಲ್ಗೊಂಡಿದ್ದರು. ಬ್ಯಾಪ್ಟಿಸ್ಟ್‌ ಡಯಾಸ್ ಸ್ವಾಗತಿಸಿದರು. ಸಾಮಂತ್ ನಿರೂಪಿಸಿದರು. ಬ್ರಾನ್ ಜೆ.ಎಸ್ ಡಿ'ಸೋಜಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.