ADVERTISEMENT

ಉಡುಪಿ | ಚಿನ್ನಾಭರಣ, ನಗದು ಕಳವು

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:37 IST
Last Updated 26 ಜೂನ್ 2022, 4:37 IST

ಹೆಬ್ರಿ: ಮನೆಗೆ ನುಗ್ಗಿದಕಳ್ಳರು ಮನೆಯಲ್ಲಿದ್ದ ₹8 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಹೋದ ಘಟನೆ ಶಿರ್ಲಾಲು ಹಾಡಿಯಂಗಡಿ ಬಳಿ ಶನಿವಾರ ನಡೆದಿದೆ.

ಇಲ್ಲಿನ ನಿವಾಸಿ ಚೆನ್ನಪ್ಪ ಜೂ. 24ಕ್ಕೆ ಮನೆಗೆ ಬೀಗ ಹಾಕಿ ಹೆಂಡತಿಯೊಂದಿಗೆ ಮಾಳದಲ್ಲಿರುವ ಹೆಂಡತಿಯ ಮನೆಗೆ ಹೋಗಿದ್ದರು. ಮರುದಿನ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮನೆ ಎದುರಿನ ಬಾಗಿಲ ಚಿಲಕ ಹಾಗೂ ಮನೆಯ ಒಳಗಿನ ಕೋಣೆಯ ಬಾಗಿಲಿನ ಬೀಗ ಮುರಿದು ಒಳಗೆ ಹೋಗಿ ಕಪಾಟಿನಲ್ಲಿದ್ದ ಕರಿಮಣಿ ಸೇರಿದಂತೆ ₹8 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹75,000 ನಗದು ಕಳವು ಮಾಡಿದ್ದಾರೆ.

ADVERTISEMENT

ಘಟನೆಗೆ ಸಂಬಂಧಿಸಿ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.