ADVERTISEMENT

‘ಪಾಲಿಸಿ ನವೀಕರಣಕ್ಕೆ ಬ್ಯಾಂಕ್ ಖಾತೆಯಲ್ಲಿ ಹಣ ಇರಲಿ‘

​ಪ್ರಜಾವಾಣಿ ವಾರ್ತೆ
Published 26 ಮೇ 2022, 3:46 IST
Last Updated 26 ಮೇ 2022, 3:46 IST

ಉಡುಪಿ: ಪ್ರಧಾನಮಂತ್ರಿ ಜೀವನ್‌ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ(ಪಿಎಂಎಸ್‌ಬಿವೈ)ಯಡಿ ನೋಂದಾಯಿಸಿಕೊಂಡಿರುವವರು ವಿಮಾ ಪಾಲಿಸಿಗಳ ನವೀಕರಣಕ್ಕೆ ಅಗತ್ಯವಿರುವಷ್ಟು ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಉಳಿಸಿರಬೇಕು ಎಂದು ಲೀಡ್ ಬ್ಯಾಂಕ್‌ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.

ಪಿಎಂಜೆಜೆಬಿವೈ ಹಾಗೂ ಪಿಎಂಎಸ್‌ಬಿವೈ ಪಾಲಿಸಿಗಳ 2022–23ನೇ ಸಾಲಿನ ನವೀಕರಣಕ್ಕೆ ಮೇ 31 ಅಂತಿಮದಿನವಾಗಿದ್ದು, ಈ ದಿನಾಂಕದೊಳಗೆ ಖಾತೆಯಲ್ಲಿ ಅಗತ್ಯವಿರುವಷ್ಟು ಹಣ ಇರುವಂತೆ ಖಾತೆದಾರರು ಎಚ್ಚರವಹಿಸಬೇಕು. ಖಾತೆಯಲ್ಲಿ ಹಣ ಇಲ್ಲದಿದ್ದರೆ ಪಾಲಿಸಿ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಿಎಂಜೆಜೆಬಿವೈ ಪಾಲಿಸಿದಾರರ ಖಾತೆಯಲ್ಲಿ ₹ 330 ಹಾಗೂ ಪಿಎಂಎಸ್‌ಬಿವೈ ಪಾಲಿಸಿದಾರರ ಖಾತೆಯಲ್ಲಿ ₹ 12 ಇರಬೇಕು. ಮೇ 25ರಿಂದ 30ರವರೆಗೂ ಪಾಲಿಸಿದಾರರ ಖಾತೆಯಿಂದ ಹಣ ಕಡಿತ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.