ಪಡುಬಿದ್ರಿ: ಮನೆಯೊಂದರ ಸಿಸಿಟಿವಿ ವೈರ್ ಕಿತ್ತು ಒಳನುಗ್ಗಿ ಚಿನ್ನಾಭರಣ ಕದ್ದೊಯ್ದ ಘಟನೆ ಇಲ್ಲಿನ ಠಾಣಾ ವ್ಯಾಪ್ತಿಯ ಪಾದೆಬೆಟ್ಟು ಕಂಚಿನಡ್ಕದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಅಕ್ರಮ್ ಅಬ್ದುಲ್ ಖಾದರ್ ಅವರು ಮೂಡಿಗೆರೆಯಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಕಳೆದ ತಿಂಗಳು ಸೌದಿ ಅರೇಬಿಯಾದಲ್ಲಿರುವ ಮಕ್ಕಳ ಮನೆಗೆ ತೆರಳಿದ್ದರು. ನವೆಂಬರ್ 10ರಂದು ಮನೆಗೆ ಬಂದ ಕಾರು ಚಾಲಕ ಅಝೀಜ್ ಎಂಬುವರು ಬಂದು ನೋಡಿದಾಗ, ಕಳ್ಳರು ಮನೆಯ ಎದುರಿನ ಬಾಗಿಲನ್ನು ಕಬ್ಬಿಣದ ಸಲಕರಣೆಯಿಂದ ಬಾಗಿಲಿನ ಮಧ್ಯ ಗುದ್ದಿ ಮೀಟಿಸಿ, ಬೀಗ ಮುರಿದು ಒಳ ಪ್ರವೇಶಿಸಿ, ಮನೆಯ ಸಿಸಿ ಕ್ಯಾಮರದ ವೈರ್ ಕಿತ್ತು ಕಳ್ಳಯನ ಮಾಡಿದ್ದಾರೆ. ಮನೆಯಲ್ಲಿದ್ದ ₹1.40 ಲಕ್ಷ ಮೌಲ್ಯದ ಚಿನ್ನ, ವಸ್ತುಗಳನ್ನು ಕದ್ದಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.