ADVERTISEMENT

ಮುಳುಗಿದ ದೋಣಿ: 9 ಮಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 13:19 IST
Last Updated 15 ಸೆಪ್ಟೆಂಬರ್ 2019, 13:19 IST
ಕಾಪು ಬಳಿ ಸಮುದ್ರದಲ್ಲಿ ಮುಳುಗುತ್ತಿರುವ ಮೀನುಗಾರಿಕಾ ದೋಣಿ
ಕಾಪು ಬಳಿ ಸಮುದ್ರದಲ್ಲಿ ಮುಳುಗುತ್ತಿರುವ ಮೀನುಗಾರಿಕಾ ದೋಣಿ   

ಉಡುಪಿ: ಕಾಪು ಸಮುದ್ರದ 30 ನಾಟಿಕಲ್ ಮೈಲ್‌ನಲ್ಲಿ ಶನಿವಾರ ಮೀನುಗಾರಿಕಾ ದೋಣಿ ಮುಳುಗಿದ್ದು, ದೋಣಿಯಲ್ಲಿದ್ದ 9 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಮಂಗಳೂರಿನ ಬಶೀರ್ ಎಂಬುವವರ ಮಾಲೀಕತ್ವದ ಎಸ್.‌ಎಂ. ಫಿಶರೀಸ್ ಹೆಸರಿನ ದೋಣಿ ಶುಕ್ರವಾರ ಮೀನುಗಾರಿಕೆಗೆ ತೆರಳಿತ್ತು. ಕಾಪು ಬಳಿ ದೋಣಿ ಮುಳುಗಲು ಆರಂಭಿಸಿದಾಗ ಸಮೀಪದಲ್ಲಿದ್ದ ಮತ್ತೊಂದು ಎಸ್.ಎಂ. ಫಿಶರೀಸ್ ದೋಣಿ ನೆರವಿಗೆ ಧಾವಿಸಿದೆ. ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT