ಉಡುಪಿ: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಉಡುಪಿ ಸಂಸ್ಥೆಯ ಅಧ್ಯಕ್ಷರಾಗಿ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಡಾ.ಸಂತೋಷ್ ಬಲ್ಲಾಳ್, ಡಾ.ಯು.ಸಿ.ನಿರಂಜನ, ಕಾರ್ಯದರ್ಶಿಯಾಗಿ ಪ್ರೊ.ಸುಬ್ರಹ್ಮಣ್ಯ ಜೋಶಿ, ಜತೆ ಕಾರ್ಯದರ್ಶಿಗಳಾಗಿ ಜೆ.ಪಿ.ಪ್ರಭಾಕರ್ ತುಮರಿ, ದೀಪಕ್ ಜೈನ್, ಕೋಶಾಧಿಕಾರಿಯಾಗಿ ವೇದವ್ಯಾಸ ಭಟ್, ನಾಟಕ ವಿಭಾಗದ ಸಂಚಾಲಕರಾಗಿ ಸಂತೋಷ್ ಶೆಟ್ಟಿ ಹಿರಿಯಡ್ಕ, ಡಾ.ರಾಘವೇಂದ್ರ ರಾವ್, ಬಾಲ ಗಂಗಾಧರ ರಾವ್, ಸುಮಾ, ಶುಭಲಕ್ಷ್ಮಿ ಕಡೇಕಾರು, ರಾಜು ಮಣಿಪಾಲ, ಗೌರವ ಸಲಹೆಗಾರರಾಗಿ ವೈದೇಹಿ, ಪ್ರೊ.ಕೆ.ಫಣಿರಾಜ್, ರಾಜಾರಾಂ ತಲ್ಲೂರು, ಸಂವರ್ತ ಸಾಹಿಲ್, ವಿಶೇಷ ಆಮಂತ್ರಿತರಾಗಿ ಜಿ.ವಿಷ್ಣು, ವಿನ್ಯಾಸ್ ಹೆಗಡೆ, ಮೈಕಲ್ ಡಿಸೋಜಾ, ಸುಶ್ಮಿತಾ ಶೆಟ್ಟಿ, ಕೀರ್ತನಾ ಉದ್ಯಾವರ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.