ADVERTISEMENT

ಅಂಚೆ ನೌಕರರಿಂದ ಶಾಸಕ ಪಾಟೀಲರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 12:35 IST
Last Updated 21 ಅಕ್ಟೋಬರ್ 2012, 12:35 IST
ಅಂಚೆ ನೌಕರರಿಂದ ಶಾಸಕ ಪಾಟೀಲರಿಗೆ ಮನವಿ
ಅಂಚೆ ನೌಕರರಿಂದ ಶಾಸಕ ಪಾಟೀಲರಿಗೆ ಮನವಿ   

ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಇಲ್ಲಿನ ಅಂಚೆ ಇಲಾಖೆಯ ಎದುರಿಗೆ ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಶಾಸಕ ವಿ.ಎಸ್.ಪಾಟೀಲ ಶನಿವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅಂಚೆ ನೌಕರರು ತಮ್ಮ ಬೇಡಿಕೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಗ್ರಾಮೀಣ ಅಂಚೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಸದರು ಹಾಗೂ ಸರ್ಕಾರದ ವತಿಯಿಂದ ಕೆಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಸಂಚೆ ನೌಕರರಾದ ನಾರಾಯಣ ಮೂಳೆ, ಆರ್.ಆರ್.ಲಮಾಣಿ, ಉದಯ ಗಾಂಜೇಕರ, ಸಿ.ಎಸ್.ಕುಲಕರ್ಣಿ, ಎ.ಎನ್.ಕುಲಕರ್ಣಿ, ಎಸ್.ಬಿ.ಐಹೊಳೆ, ಆರ್.ಆರ್.ಅರ್ಕಸಾಲಿ, ಐ.ಎಸ್.ಕಮ್ಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.