ADVERTISEMENT

ಕೆರೆಯಲ್ಲಿ ಮರಿಯಾನೆ ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 6:37 IST
Last Updated 6 ಅಕ್ಟೋಬರ್ 2017, 6:37 IST
ಕೆರೆಯಲ್ಲಿ ಮರಿಯಾನೆ ಸಾವು
ಕೆರೆಯಲ್ಲಿ ಮರಿಯಾನೆ ಸಾವು   

ಮುಂಡಗೋಡ: ತಾಲ್ಲೂಕಿನ ಗುಂಜಾವತಿ ಅರಣ್ಯ ವ್ಯಾಪ್ತಿಯ ಮೂಕನಕಟ್ಟೆ ಕೆರೆಯಲ್ಲಿ ಸುಮಾರು ಮೂರುವರೆ ವರ್ಷದ ಆನೆ ಮರಿಯೊಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.

ಕಳೆದ ಎರಡಮೂರು ದಿನದ ಹಿಂದೆಯೇ ಆನೆ ಮರಿ ಮೃತಪಟ್ಟಿರಬಹುದೆಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

ನಾಲ್ಕೈದು ದಿನಗಳ ಹಿಂದೆಯೇ ತಾಲ್ಲೂಕಿನ ಅರಣ್ಯ ಗಡಿಭಾಗದ ಗುಂಜಾವತಿ ಅರಣ್ಯವನ್ನು ಪ್ರವೇಶಿಸಿರುವ ಕಾಡಾನೆಗಳ ಹಿಂಡು, ಅರಣ್ಯದಂಚಿನ ಭತ್ತದ ಗದ್ದೆಗಳಲ್ಲಿ ಸಂಚರಿಸಿವೆ. ಅರಣ್ಯದ ಮಧ್ಯಭಾಗದಲ್ಲಿರುವ ಮೂಕನಕಟ್ಟೆ ಕೆರೆಗೆ ನೀರು ಕುಡಿಯಲು ಬಂದಿರುವಾಗ ಕೆರೆಯಲ್ಲಿ ಬಿದ್ದಿರಬಹುದು. ಇಲ್ಲವೇ ಕಾಡಾನೆಗಳ ಜಗಳದಲ್ಲಿ ಗಾಯಗೊಂಡು ನೀರಿನಿಂದ ಮೇಲಕ್ಕೇಳದೆ ಮೃತಪಟ್ಟಿರಬಹುದೆಂದು ಅರಣ್ಯ ಅಧಿಕಾರಿ ಶಂಕಿಸಿದ್ದಾರೆ.

ಎಸಿಎಫ್ ಶಶಿಧರ, ಆರ್‌ಎಫ್‌ಒ ಸುರೇಶ ಕಲ್ಲೊಳ್ಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.