ಶಿರಸಿ: ಇಲ್ಲಿನ ಬಿಡ್ಕಿ ಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ಪ್ರೀತಿ ಪದಗಳ ಪಯಣ ಹೆಸರಿನಲ್ಲಿ ಸೌಹಾರ್ದತಾ ನಡಿಗೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಅಹಮದಾಬಾದ್ನ ಮಾನವ ಹಕ್ಕು ಹೋರಾಟಗಾರ ಮಾರ್ಟಿನ್ ಮಾಕ್ವಾನ್ ಚಾಲನೆ ನೀಡಿದರು.
ಶಿರಸಿಯ ಪ್ರಮುಖ ಬೀದಿಗಳಲ್ಲಿ ಸೌಹಾರ್ದತಾ ನಡಿಗೆ ನಡೆಯುತ್ತಿದ್ದು, ನಡಿಗೆಯಲ್ಲಿ ಬರಹಗಾರ ರಹಮತ್ ತರೀಕೆರೆ, ಸಾಹಿತಿ ವಿನಯ ಒಕ್ಕುಂದ, ಕೆ.ಎಸ್. ವಿಮಲಾ, ಸುನಂದ ಕಡಮೆ ಹಾಗೂ ಇತರರು ಭಾಗಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.