ಗೋಕರ್ಣ: ಬೈಕ್- ಲಾರಿ ನಡುವೆ ಶನಿವಾರ ತಡರಾತ್ರಿ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸಾಯಿನ್ಶೆಟ್ಟಿ (19) ಮತ್ತು ಆರ್ತಿಕ್ ಶೆಟ್ಟಿ (19) ಸ್ಥಳದಲ್ಲಿಯೇ ಮೃತಪಟ್ಟವರು. ಇಬ್ಬರೂ ಉಡುಪಿಯ ಅಂಬಲಪಾಡಿಯವರು.
ಗೋಕರ್ಣ ಸಮೀಪದ ಹಿರೇಗುತ್ತಿಯ ಮಕರ ಹೋಟೆಲ್ ಬಳಿ ಅಪಘಾತ ನಡೆದಿದೆ. ಉಡುಪಿಯಿಂದ ಗೋಕರ್ಣದ ಕಡೆ ಬರುತ್ತಿದ್ದಬೈಕ್ಗೆ ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ಡಿಕ್ಕಿಯಾಗಿದೆ.
ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.