ADVERTISEMENT

ಲಾರಿ–ಕಾರು ಡಿಕ್ಕಿ: ಒಬ್ಬನ ಸಾವು

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 14:30 IST
Last Updated 11 ಜುಲೈ 2019, 14:30 IST
ಅಪಘಾತದಲ್ಲಿ ನುಜ್ಜಾಗಿರುವ ಕಾರು
ಅಪಘಾತದಲ್ಲಿ ನುಜ್ಜಾಗಿರುವ ಕಾರು   

ಶಿರಸಿ: ತಾಲ್ಲೂಕಿನ ರಾಗಿಹೊಸಳ್ಳಿ ಸಮೀಪ ಶಿವಗದ್ದೆಯಲ್ಲಿ ಗುರುವಾರ, ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಎದುರಿನಿಂದ ಬರುತ್ತಿದ್ದ ಲಾರಿಗೆ ಗುದ್ದಿದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಸಿದ್ದಾಪುರ ರವೀಂದ್ರನಗರದ ಪುಂಡಲೀಕ ಶಾನಭಾಗ (72) ಮೃತವ್ಯಕ್ತಿ. ಕಾರಿನಲ್ಲಿದ್ದ ಮಂಜುನಾಥ ಭೀಮಪ್ಪ ನೀಲಿ (39), ಅಶ್ವಿನಿ ಶಾನಭಾಗ (27), ನಾರಾಯಣ ಶಾನಭಾಗ (82) ಗಾಯಗೊಂಡವರು. ಕಾರು ಶಿರಸಿಯಿಂದ ಕುಮಟಾ ಕಡೆ ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT