ADVERTISEMENT

ಬಿಲ್ಲುಗಾರಿಕೆ: ಅಮಿತ್‌ಗೆ ಮೊದಲ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 4:41 IST
Last Updated 27 ಜನವರಿ 2026, 4:41 IST
ಅಮಿತ ಜಯಂತ ಗೌಡ
ಅಮಿತ ಜಯಂತ ಗೌಡ   

ಕಾರವಾರ: ತುಮಕೂರಿನಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಒಲಿಂಪಿಕ್ಸ್ ಕ್ರೀಡಾಕೂಟದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಅಂಕೋಲಾ ತಾಲ್ಲೂಕಿನ ಜಮಗೋಡದ ಅಮಿತ ಜಯಂತ ಗೌಡ ಅವರು ಮೊದಲ ರ್‍ಯಾಂಕಿಂಗ್ ಗಳಿಸಿದ್ದಾರೆ.

30 ಮೀ  ವಿಭಾಗದಲ್ಲಿ ಚಿನ್ನದ ಪದಕ, 50 ಮೀ. ವಿಭಾಗದಲ್ಲಿ ಬೆಳ್ಳಿ ಪದಕ, ಎಲಿಮಿನೇಷನ್ ಸುತ್ತಿನಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಮೊದಲ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಮಾರುತಿ ಅವರು ವನವಾಸಿ ಕಲ್ಯಾಣ ಸಂಸ್ಥೆಯ ಕೋದಂಡ ರಾಮ ಬಿಲ್ಲುಗಾರಿಕೆ ಕ್ರೀಡಾ ಕೇಂದ್ರದ ಪಟುವಾಗಿದ್ದಾರೆ.

ಇದೇ ಸಂಸ್ಥೆಯ ಮನೋಜ್ ಗೌಡ, ಶ್ರೀಧರ ಗೌಡ, ಯುಕ್ತಾ ಗೌಡ ಕೂಡ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.