ಶಿರಸಿ: ಇಲ್ಲಿನ ಅರುಣೋದಯ ಸಂಸ್ಥೆ ಪಾಂಡುರಂಗ ಬಿ. ನಾಯ್ಕ ಹಸೆರಿನಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಿಗೆ ನೀಡುವ ‘ಪಾಂಡುರಂಗ’ ಪ್ರಶಸ್ತಿಗೆ ಯಡಳ್ಳಿ ಶಾಲೆಯ ಗಣಪತಿ ಭಟ್ಟ, ಗೋಣಗಟ್ಟಾ ಶಾಲೆಯ ಮಹಾದೇವ ನಾಯಕ ಆಯ್ಕೆಯಾಗಿದ್ದಾರೆ.
ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಸೆ.5 ರಂದು ಸಂಸ್ಥೆಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಅರುಣೋದಯ ಸಂಸ್ಥೆಯ ಸತೀಶ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.