ADVERTISEMENT

ಬನವಾಸಿಯಲ್ಲಿ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 14:43 IST
Last Updated 22 ನವೆಂಬರ್ 2019, 14:43 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ವೈದಿಕರು ಮಹಾರುದ್ರ ಹವನ ನೆರವೇರಿಸಿದರು
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ವೈದಿಕರು ಮಹಾರುದ್ರ ಹವನ ನೆರವೇರಿಸಿದರು   

ಬನವಾಸಿ: ಶಿರಸಿ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಗುರುವಾರ ಲಕ್ಷ ದೀಪೋತ್ಸವವು ವೈಭವದಿಂದ ನೆರವೇರಿತು. ಭಕ್ತರು ದೇವಾಲಯದ ಸುತ್ತ ದೀಪ ಬೆಳಗಿ, ಮಧುಕೇಶ್ವರನಿಗೆ ನಮಿಸಿದರು. ದೀಪೋತ್ಸವದ ಅಂಗವಾಗಿ ದೇವಾಲಯದಲ್ಲಿ ಮಹಾರುದ್ರ ಹವನ ನಡೆಯಿತು. ಕ್ಷೇತ್ರದ ಹಿರಿಯ ವೈದಿಕ ಗುರುನಾಥ ದೀಕ್ಷಿತ ಮತ್ತು ಸಾವಿತ್ರಿ ದೀಕ್ಷಿತ ದಂಪತಿ, ದೇವಾಲಯಕ್ಕೆ ₹ 60ಸಾವಿರ ದೇಣಿಗೆ ನೀಡಿದರು.

ವೈದಿಕರಾದ ಪಶುಪತಿ ಶಾಸ್ತ್ರಿ, ನಾಗೇಂದ್ರ ಪತ್ರೆ, ಶ್ರೀನಿಧಿ ಮಂಗಳೂರು, ಸುರೇಶ ಪುರೋಹಿತ ಅವರನ್ನು ಸನ್ಮಾನಿಸಲಾಯಿತು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್, ಉಪಾಧ್ಯಕ್ಷ ಶಿವಾನಂದ ದೀಕ್ಷಿತ, ಧರ್ಮದರ್ಶಿಗಳಾದ ಜಿ.ಎ.ಹೆಗಡೆ ಸೋಂದಾ, ಹನುಮಂತಪ್ಪ ಮಡ್ಲೂರು, ಗೀತಾ ಯಜಮಾನ, ಮಂಗಳಾ ದಾವಣಗೇರಿ, ವ್ಯವಸ್ಥಾಪಕ ಅಭಿಯಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT