ಹೊನ್ನಾವರ: ತಾಲ್ಲೂಕಿನ ಕಾವೂರು ಗ್ರಾಮದ ಗಣಪತಿ ಗೌಡ ಅವರ ಮನೆಯ ಸಮೀಪ ಸೋಮವಾರ ಗುಡ್ಡ ಕುಸಿದು ಬೃಹತ್ ಗಾತ್ರದ ಬಂಡೆ ಉರುಳಿದೆ. ಮನೆಯ ಹತ್ತಿರದಲ್ಲೇ ಬಂದು ನಿಂತಿದ್ದು, ಅದೃಷ್ಟವಶಾತ್ ಜೀವಹಾನಿಯಾಗಿಲ್ಲ.
ಒಂದು ದೊಡ್ಡ ಹಾಗೂ ಎರಡು ಸಣ್ಣ ಬಂಡೆಗಳು ಮನೆಯಂಗಳದಲ್ಲಿದ್ದ ಕೊಟ್ಟಿಗೆಯ ಚಾವಣಿ ನೆಲಸಮವಾಗಿದೆ. ಉಳಿದಂತೆ ಹೆಚ್ಚಿನ ಅನಾಹುತಗಳಾಗಿಲ್ಲ. ತಹಶೀಲ್ದರ್ ವಿವೇಕ ಶೇಣ್ವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಆಸ್ತಿ ಪಾಸ್ತಿಗೆ ಹಾನಿಯಾಗಿಲ್ಲ. ಬಂಡೆಯನ್ನು ತೆರವುಗೊಳಿಸಬೇಕಿದೆ’ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.