ADVERTISEMENT

ಕಂಚನಕೇರಿ: ಚಿರತೆ ದಾಳಿಯಿಂದ ಗಾಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 16:22 IST
Last Updated 11 ಏಪ್ರಿಲ್ 2019, 16:22 IST
ಅಂಕೋಲಾ ತಾಲ್ಲೂಕಿನ ಕಂಚನಕೇರಿಯಲ್ಲಿ ಚಿರತೆಯ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಶಂಕರ ಗೌಡ ಅವರ ಆರೋಗ್ಯವನ್ನು ಎಸಿಎಫ್ ನಂಜುಂಡಪ್ಪ ವಿಚಾರಿಸಿದರು
ಅಂಕೋಲಾ ತಾಲ್ಲೂಕಿನ ಕಂಚನಕೇರಿಯಲ್ಲಿ ಚಿರತೆಯ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಶಂಕರ ಗೌಡ ಅವರ ಆರೋಗ್ಯವನ್ನು ಎಸಿಎಫ್ ನಂಜುಂಡಪ್ಪ ವಿಚಾರಿಸಿದರು   

ಅಂಕೋಲಾ:ತಾಲ್ಲೂಕಿನ ಅಚವೆ ಗ್ರಾಮದ ಕಂಚನಕೇರಿಯಲ್ಲಿ ಗುರುವಾರ ಬೆಳಿಗ್ಗೆ ಕೋಳಿ ಗೂಡಿಗೆ ನುಗ್ಗಿದ್ದ ಚಿರತೆಯನ್ನು ಓಡಿಸಲು ಹೋದ ಶಂಕರ ರಾಮಾ ಗೌಡ ಎಂಬುವವರ ಮೇಲೆ ಚಿರತೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ.

ಅವರನ್ನು ಚಿಕಿತ್ಸೆಗಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂಜುಂಡಪ್ಪ, ಉಪ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ ಆಸ್ಪತ್ರೆಗೆ ಭೇಟಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.

‘ಚಿರತೆ ದಾಳಿಗೊಳಗಾದ ಶಂಕರ ಗೌಡ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಆಸ್ಪತ್ರೆ ಹಾಗೂ ಇತರ ವೆಚ್ಚಗಳನ್ನು ಇಲಾಖೆಯಿಂದ ನೀಡಲಾಗುವುದು. ಈ ಬಗ್ಗೆ ಪಂಚನಾಮೆ ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಸಿಎಫ್ ನಂಜುಂಡಪ್ಪ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.