ADVERTISEMENT

ಆರ್ಯದೇವನ ಕೊಡುಗೆ ಅಪಾರ: ಧರ್ಮಗುರು ದಲೈಲಾಮಾ

ಗಾಡೆನ್ ಲಾಚಿ ಮಂದಿರಕ್ಕೆ ದಲೈಲಾಮಾ ಭೇಟಿ ಇಂದು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 15:18 IST
Last Updated 17 ಡಿಸೆಂಬರ್ 2019, 15:18 IST
ಡ್ರೆಪುಂಗ್‌ ಲೋಸಲಿಂಗ್‌ ಅಸೆಂಬ್ಲಿ ಹಾಲ್‌ನಲ್ಲಿ ನಡೆದ ಆರ್ಯದೇವನ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ದಲೈಲಾಮಾ ಬಿಕ್ಕುಗಳತ್ತ ಕೈಬೀಸಿದರು
ಡ್ರೆಪುಂಗ್‌ ಲೋಸಲಿಂಗ್‌ ಅಸೆಂಬ್ಲಿ ಹಾಲ್‌ನಲ್ಲಿ ನಡೆದ ಆರ್ಯದೇವನ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ದಲೈಲಾಮಾ ಬಿಕ್ಕುಗಳತ್ತ ಕೈಬೀಸಿದರು   

ಮುಂಡಗೋಡ: ‘ಬೌದ್ಧ ಗ್ರಂಥಗಳ ಲೇಖಕ ಹಾಗೂ ಕನದೇವ ಎಂದೂ ಕರೆಯುವ ಆರ್ಯದೇವರು, ಬೌದ್ಧ ಧರ್ಮದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದಾರೆ’ ಎಂದು ಟಿಬೆಟನ್ ಧರ್ಮಗುರು ದಲೈಲಾಮಾ ಹೇಳಿದರು.

ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ ನಂ.6ರ ಡ್ರೆಪುಂಗ್ ಲೋಸಲಿಂಗ್‌ ಅಸೆಂಬ್ಲಿ ಹಾಲ್‌ನಲ್ಲಿ ಮಂಗಳವಾರ ನಡೆದ, ಆರ್ಯದೇವರ, ‘ಮಧ್ಯದ ದಾರಿಯಲ್ಲಿ 400 ಚರಣಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ವಿದ್ವಾಂಸ ಬಿಕ್ಕುಗಳು ಆರ್ಯದೇವರ ಕುರಿತು ಪ್ರಸ್ತುತಪಡಿಸಿದರು. ಅಧ್ಯಯನನಿರತ ಕೆಲವು ಬಿಕ್ಕುಗಳು ಸಹ ತಾವು ಕಲಿತಿರುವುದನ್ನು ಬೌದ್ಧ ಗುರುವಿನ ಮುಂದೆ ಮಂಡಿಸಿದರು.

ದಲೈಲಾಮಾ ಬುಧವಾರ ಮಧ್ಯಾಹ್ನ ಕ್ಯಾಂಪ್‌ ನಂ.1ರಲ್ಲಿರುವ ಗಾಡೆನ್ ಲಾಚಿ ಬೌದ್ಧ ಮಂದಿರಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ. ನಂತರ ಗಾಡೆನ್‌ ಶಾರ್ಟ್ಸೆ ಬೌದ್ಧ ಮಂದಿರದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.