ADVERTISEMENT

ಜಿ.ಟಿ.ಹೆಗಡೆ ಕೊರ್ಲಕೈ ನಿಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 12:19 IST
Last Updated 2 ಜುಲೈ 2019, 12:19 IST
ಜಿ.ಟಿ.ಹೆಗಡೆ ಕೊರ್ಲಕೈ
ಜಿ.ಟಿ.ಹೆಗಡೆ ಕೊರ್ಲಕೈ   

ಶಿರಸಿ: ಇಲ್ಲಿನ ಹಿರಿಯ ವಕೀಲ ಜಿ.ಟಿ.ಹೆಗಡೆ ಕೊರ್ಲಕೈ (89) ಮಂಗಳವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಶಿರಸಿ ಪುರಸಭೆ ಅಧ್ಯಕ್ಷರಾಗಿ, ಮಾರಿಕಾಂಬಾ ದೇವಾಲಯದ ವಿಶ್ವಸ್ಥ ಮಂಡಳಿ, ರೋಟರಿ ಕ್ಲಬ್ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಪ್ರಥಮ ನೋಟರಿಯಾಗಿ ನಿಯುಕ್ತಿಗೊಂಡು, ಸುದೀರ್ಘ ಅವಧಿಯವರೆಗೆ ಕಾರ್ಯ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜೊತೆ ವಕೀಲ ವೃತ್ತಿ ಪ್ರಾರಂಭಿಸಿ, ಒಳ್ಳೆಯ ಹೆಸರು ಮಾಡಿದ್ದರು.

ಜಿ.ಟಿ.ಹೆಗಡೆ ನಿಧನದ ಗೌರವಾರ್ಥ ವಕೀಲರು ಶ್ರದ್ಧಾಂಜಲಿ ಸಭೆ ನಡೆಸಿ, ನ್ಯಾಯಾಲಯ ಕಲಾಪದಿಂದ ಹೊರಗುಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT