ADVERTISEMENT

ಸ್ವಾಮೀಜಿ ಬೆಂಗಾವಲು ವಾಹನ ಡಿಕ್ಕಿ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 15 ಮೇ 2022, 15:46 IST
Last Updated 15 ಮೇ 2022, 15:46 IST
   

ಭಟ್ಕಳ: ತಾಲ್ಲೂಕಿನ ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದ ಎದುರು ಭಾನುವಾರ ರಸ್ತೆ ದಾಟುತ್ತಿದ್ದ ಮಹಿಳೆಗೆ, ಉಜಿರೆ ಶ್ರೀರಾಮ‌ ಕ್ಷೇತ್ರ‌ದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯ ಬೆಂಗಾವಲು ಪೊಲೀಸ್ ವಾಹನ ಡಿಕ್ಕಿಯಾಗಿದೆ. ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜಾಲಿ ಪಟ್ಟಣದ ಹಿಂದೂ ಕಾಲೊನಿ ನಿವಾಸಿ ವಿಜಯಾ ರಘು ಹೊನ್ನಾವರಕರ (69) ಮೃತರು. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಭಟ್ಕಳದ ಬೆಳ್ಕೆ ವಿ.ಎಸ್.ಎಸ್ ಬ್ಯಾಂಕ್‌ನ ನೂತನ ಕಟ್ಟಡವನ್ನು ಉದ್ಘಾಟಿಸಿ ಸಾರದ ಹೊಳೆ ಕಡೆ ಸಾಗುತ್ತಿದ್ದಾಗ ದುರ್ಘಟನೆ ನಡೆಯಿತು.

ಸ್ವಾಮೀಜಿ ಬೆಂಗಾವಲು ಪೊಲೀಸ್ ವಾಹನವು ವೇಗವಾಗಿ ಸೈರನ್ ಮೊಳಗಿಸಿಕೊಂಡು ಹೋಗುತ್ತಿದ್ದಾಗ ಶಿರಾಲಿ ಹೆದ್ದಾರಿಯಲ್ಲಿ ಮಹಿಳೆಯು ಏಕಾಏಕಿ ರಸ್ತೆ ದಾಟಲು ಮುಂದಾದರು. ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.