ADVERTISEMENT

ಶಿರಸಿಯಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 13:56 IST
Last Updated 7 ಜುಲೈ 2020, 13:56 IST
ಮಂಗಳವಾರ ಮಧ್ಯಾಹ್ನ ಶಿರಸಿಯ ಅಶ್ವಿನಿ ವೃತ್ತದಲ್ಲಿ ಕಂಡುಬಂದ ದೃಶ್ಯ
ಮಂಗಳವಾರ ಮಧ್ಯಾಹ್ನ ಶಿರಸಿಯ ಅಶ್ವಿನಿ ವೃತ್ತದಲ್ಲಿ ಕಂಡುಬಂದ ದೃಶ್ಯ   

ಶಿರಸಿ: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಂದ ಪ್ರಾರಂಭವಾದ ಮಳೆ, ಮಂಗಳವಾರ ಬಿರುಸಿನಿಂದ ಸುರಿಯಿತು. ಆಗಾಗ ಸಣ್ಣ ಬಿಡುವಿನೊಂದಿಗೆ ದಿನವಿಡೀ ಧಾರಾಕಾರ ಮಳೆಯಾಯಿತು.

ಸಮರ್ಪಕ ಚರಂಡಿಯಿಲ್ಲದ ಕಾರಣ ನಗರದ ಯಲ್ಲಾಪುರ ನಾಕಾ ಸಮೀಪ ಆಶಾ ಪ್ರಭು ಆಸ್ಪತ್ರೆಯ ಎದುರು ರಾಜ್ಯ ಹೆದ್ದಾರಿಯ ಮೇಲೆ ನೀರು ನಿಂತಿದೆ. ಈ ನೀರಿನಲ್ಲೇ ವಾಹನಗಳು ಸಾಗುತ್ತಿವೆ. ಕೋವಿಡ್ 19 ಭಯದಿಂದ ಜನರು ಮನೆಯಿಂದ ಹೊರಬರುವುದು ಕಡಿಮೆಯಾಗಿದೆ. ಮಳೆಯೂ ಇದ್ದ ಕಾರಣ ಜನಸಂಚಾರ ಇನ್ನಷ್ಟು ವಿರಳವಾಗಿತ್ತು. ಹಗಲಿನಲ್ಲೂ ವಾಹನ ಸವಾರರು ಲೈಟ್‌ ಹಾಕಿಕೊಂಡು ವಾಹನ ಓಡಿಸುವುದು ಕಂಡುಬಂತು. ದಿನವಿಡೀ ಮೋಡ ಕವಿದ ವಾತಾವರಣದಿಂದ ಮೈ ಕೊರೆಯುವ ಚಳಿಯ ಅನುಭವವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT