ಶಿರಸಿ: ಸತತ ಮಳೆಯಿಂದ ಕುಸಿದಿದ್ದ ತಾಲ್ಲೂಕಿನ ಹಲಗದ್ದೆ ಗ್ರಾಮ ಪಂಚಾಯ್ತಿಯ ಎರಡು ಕುಟುಂಬಗಳಿಗೆ ಗ್ರಾಮ ಪಂಚಾಯ್ತಿ ಸದಸ್ಯ ಅರವಿಂದ ತೇಲಗುಂದ ಸ್ವಂತ ಖರ್ಚಿನಿಂದ ತಲಾ ₹ 5 ಸಾವಿರ ಪರಿಹಾರ ನೀಡಿದರು.
ಹಲಗದ್ದೆಯ ಗುತ್ಯಮ್ಮ ಚಲವಾದಿ, ವಡ್ಡಿನಕೊಪ್ಪದ ಸುಶೀಲಾ ಪೂಜಾರಿ ಎಂಬುವವರ ಮನೆ ಕುಸಿದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅರವಿಂದ ತುರ್ತು ಸಹಾಯಕ್ಕೆ ಸ್ವಂತ ಖರ್ಚಿನಲ್ಲಿ ಪರಿಹಾರ ಒದಗಿಸಿದರು. ಸದಸ್ಯರಾದ ರೇಣುಕಾ ತಳವಾರ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಐ.ಜಿ.ಚೆನ್ನಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.