ಶಿರಸಿ: ಹಿರಿಯ ಪತ್ರಕರ್ತ ತಾಲ್ಲೂಕಿನ ಬೆಳಖಂಡದ ಸೀತಾರಾಮ ಭಟ್ಟ (60) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಹಲವು ವರ್ಷಗಳ ಕಾಲ ಸ್ಥಳೀಯ ಪತ್ರಿಕೆ ವರದಿಗಾರರಾಗಿ, ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಮಂಡಳಿ ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.
ಡಿ.ಜಿ.ಭಟ್ಟ ಕೋಳಿಗಾರ ನಿಧನ
ಶಿರಸಿ: ಬಡಗುತಿಟ್ಟು ಯಕ್ಷಗಾನದ ವೇಷಭೂಷಣ, ಮುಖವರ್ಣಿಕೆ, ರಂಗಪರಿಕರ ಸಿದ್ಧಪಡಿಸುವ ಕಲಾವಿದರಾಗಿದ್ದ ತಾಲ್ಲೂಕಿನ ಕೋಳಿಗಾರದ ಡಿ.ಜಿ.ಭಟ್ಟ (62) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಯಕ್ಷಗಾನ ವೇಷಭೂಷಣಗಳ ತಯಾರಿಕೆಯೇ ಅವರಿಗೆ ಬದುಕಾಗಿತ್ತು. ಯಕ್ಷಕಿರಣ ಎನ್ನುವ ಮಕ್ಕಳ ಯಕ್ಷಗಾನ ಮೇಳ ಕಟ್ಟಿದ್ದರು. ಹಲವಾರು ವರ್ಷ ಯಕ್ಷಗಾನ ಕಲಿಕಾ ಶಿಬಿರವನ್ನು ಉಚಿತವಾಗಿ ನಡೆಸಿ, ನೂರಾರು ಮಕ್ಕಳಿಗೆ ಯಕ್ಷಗಾನ ಕಲಿಸಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ, ಯಕ್ಷಗಾನ ಅಕಾಡೆಮಿ ಅಲ್ಪ ಆರ್ಥಿಕ ನೆರವು ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.