ಕಾರವಾರ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಕೆರವಡಿ ಗ್ರಾಮದ ಖಾಂಡ್ಯಾಳಿ ಮಜಿರೆಯಲ್ಲಿ ನದಿಯಂಚಿನ ಮಣ್ಣು ಕುಸಿಯುತ್ತಿದೆ.ಇದರಿಂದ ಸ್ಥಳೀಯ ನಿವಾಸಿಸುರೇಶ ರಾಮ ಪಾಗಿಅವರ ಮನೆ ಅಪಾಯದಲ್ಲಿದ್ದು, ಮನೆ ಮಂದಿ ಆತಂಕದಲ್ಲಿದ್ದಾರೆ.
ಮೀನುಗಾರ ಕುಟುಂಬದವರಾಗಿರುವ ಕಾರಣ ಅವರು ಸುಮಾರು 35 ವರ್ಷಗಳಿಂದ ನದಿಯ ಸಮೀಪವೇ ಮನೆ ಮಾಡಿಕೊಂಡಿದ್ದಾರೆ. ಮನೆಯುಮಣ್ಣಿನ ಗೋಡೆಯದ್ದಾಗಿರುವುದೂ ಅವರ ಭೀತಿಗೆಮತ್ತೊಂದು ಕಾರಣವಾಗಿದೆ. ಮನೆಯ ಸಮೀಪದಲ್ಲಿ ಮಣ್ಣು ಕುಸಿದು, ತೋಟದಲ್ಲಿದ್ದ ತೆಂಗಿನ ಮರಗಳು ಬುಡಮೇಲಾಗಿವೆ.
ಈ ಮಜಿರೆಯು ಗ್ರಾಮ ಪಂಚಾಯ್ತಿ ಕಚೇರಿಯಿಂದಎರಡುಕಿ.ಮೀ ದೂರದಲ್ಲಿದೆ. ನದಿತೀರದ ಸಮೀಪ ಮೀನುಗಾರರ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಇವೆ.ಕಳೆದ ವರ್ಷದ ಪ್ರವಾಹದ ಸಂದರ್ಭವೂ ಸುರೇಶ ಅವರ ಮನೆ ಜಲಾವೃತವಾಗಿತ್ತು. ಈ ವರ್ಷದಜುಲೈ 9ರಂದು ಸುರಿದ ಭಾರಿ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಇದರಿಂದ ನದಿತೀರದ ಕೆಳಗಿನ ಗುಡ್ಡದ ಮಣ್ಣು ಕುಸಿದು ಮರಗಳು ಉರುಳಿವೆ.
‘ಮನೆಗೆ ಅಪಾಯ ಎದುರಾಗಿರುವ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಒ) ಮತ್ತು ತಹಶೀಲ್ದಾರ್ಅವರಿಗೆಲಿಖಿತ ಮನವಿ ನೀಡಿದ್ದರು. ನೋಡಲ್ ಅಧಿಕಾರಿ ಮತ್ತುಪಿ.ಡಿ.ಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಸಮಸ್ಯೆಗೆ ಪರಿಹಾರದ ಬಗ್ಗೆ ಭರವಸೆ ನೀಡಿಲ್ಲ’ ಎಂದು ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುನ್ನೆಚ್ಚರಿಕೆಯಾಗಿ ಪರಿಹಾರ ಕೇಂದ್ರ:ಸುರೇಶ ಅವರ ಮನೆಯಲ್ಲಿ ಆರು ಮಂದಿಯಿದ್ದು, ಕೆರವಡಿ ಗ್ರಾಮ ಪಂಚಾಯ್ತಿಯುಮುನ್ನೆಚ್ಚರಿಕೆಯಾಗಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಯಲ್ಲಿ ಪರಿಹಾರ ಕೇಂದ್ರ ತೆರೆದಿದೆ. ಆದರೆ, ಅವರ ಮನೆಯಿಂದ ಇಲ್ಲಿಗೆ ಸುಮಾರು ಎರಡು ಕಿಲೋಮೀಟರ್ ದೂರವಿದೆ. ಹಾಗಾಗಿ ಅವರ ಕುಟುಂಬದ ಆತಂಕವನ್ನು ದೂರ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.