ADVERTISEMENT

ನಾಲ್ಕು ದಶಕ ಇತಿಹಾಸದ ಮಹಾಸತಿ ದೇಗುಲ

ಬೆಳಂಬಾರದ ದೇವಸ್ಥಾನದಲ್ಲಿ ಕಲಾವೃದ್ಧಿ ಹೋಮ ಸಂಪನ್ನ

ಪ್ರವೀಣ್ ಗೌಡ ಬೆಳಂಬಾರ
Published 4 ಮೇ 2019, 19:46 IST
Last Updated 4 ಮೇ 2019, 19:46 IST
ಸನ್ಯಾಸಿ ದೇವರು
ಸನ್ಯಾಸಿ ದೇವರು   

ಕಾರವಾರ: ಅಂಕೋಲಾ ತಾಲ್ಲೂಕಿನ ಬೆಳಂಬಾರ ಗ್ರಾಮದ ವಾಡಿಬೊಗ್ರಿ ಶಾಲೆಯ ಸಮೀಪವಿರುವ ಮಹಾಸತಿ ಹಾಗೂ ಸನ್ಯಾಸಿ ದೇವರ ದೇವಾಲಯಕ್ಕೆ40ಕ್ಕೂ ಅಧಿಕವರ್ಷಗಳ ಇತಿಹಾಸವಿದೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಆರಾಧ್ಯ ದೇವರಿಗೆ ವರ್ಷಪೂರ್ತಿ ಶ್ರದ್ಧಾನಿಷ್ಠೆಯಿಂದ ನಡೆದುಕೊಳ್ಳುವ ಸಾವಿರಾರು ಭಕ್ತರಿದ್ದಾರೆ.

ಹಿಂದೂ ಸಂಪ್ರದಾಯದ ವಿಶೇಷ ದಿನಗಳಂದು ದೇವಸ್ಥಾನದಲ್ಲಿ ಪೂಜೆ, ಹೋಮ, ಹವನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಗುತ್ತದೆ. ದೇವಸ್ಥಾನದ ಸುತ್ತಮುತ್ತ ಜಾತ್ರೆಯ ವಾತಾವರಣ ಉಂಟಾಗಿ ಸಂಭ್ರಮ ಮೇಳೈಸುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೇಳಿಕೊಂಡ ಹರಕೆಗಳನ್ನು ಸಲ್ಲಿಸಿ ಭಕ್ತಿ ಮೆರೆಯುತ್ತಾರೆ.

ದೇವಸ್ಥಾನದಲ್ಲಿ ಕಲಾವೃದ್ಧಿ ಹೋಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಈಚೆಗೆ ವಿಜೃಂಭಣೆಯಿಂದ ನೆರವೇರಿತು.‌ ಕಲಾವೃದ್ಧಿಯ ಅಂಗವಾಗಿ ದೇಗುಲದಲ್ಲಿಗಣೇಶ ಪೂಜೆ, ಪುಣ್ಯಾಹ ನಾಂದಿ, ದೇವ ಪ್ರಾರ್ಥನೆ, ಕೌತುಕ ಬಂಧನ, ವಾಸ್ತು, ರಾಕ್ಷೋಘ್ನಹೋಮ, ಬಲಿ, ಕರ್ಮಾಂಗ ಪುಣ್ಯಾಹ, ಭೂತ ಶುದ್ಧಿ, ನವಗ್ರಹ ಹೋಮ, ಪೂರ್ಣಾಹುತಿ ಹಮ್ಮಿಕೊಳ್ಳಲಾಯಿತು. ಇದರೊಂದಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಿಷ್ಠೆಯಿಂದ ನೆರವೇರಿಸಲಾಯಿತು.

ADVERTISEMENT

ಭಕ್ತರು ಈಕೈಂಕರ್ಯದಲ್ಲಿ ಪಾಲ್ಗೊಂಡು, ದೇವರಿಗೆ ಹಣ್ಣು– ಕಾಯಿ ಸಮರ್ಪಿಸಿದರು.ತೀರ್ಥ ಪ್ರಸಾದ ಸ್ವೀಕರಿಸಿದರು. ಭಕ್ತಿಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು, ಕಲಾವೃದ್ಧಿ ಹೋಮ ಕಾರ್ಯಕ್ಕೆ ವಿಶೇಷ ಆಮಂತ್ರಿತರು, 10ಮಂದಿ ಪ್ರಮುಖರು, ದೇವಸ್ಥಾನದ ಸಮಿತಿಯವರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ಕಾರ್ಯಕ್ರಮದ ಅಂಗವಾಗಿ ಅಂದುರಾತ್ರಿ ‘ಹಾಲಕ್ಕಿ ಒಕ್ಕಲಿಗರ ಯಕ್ಷ ರಂಗವೇದಿಕೆ’ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ನಳ ದಮಯಂತಿ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾವಿದರು ಕಲಾಪ್ರೇಮಿಗಳಿಂದ ಮೆಚ್ಚುಗೆ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.